ರಾಜಧಾನಿ ಬೆಂಗಳೂರಿನಲ್ಲೂ ಕಾಲಿಟ್ಟ ಫ್ರೀ ಕಾಶ್ಮೀರ ಕಿಚ್ಚು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೆಹಲಿ, ಮುಂಬೈ, ಮೈಸೂರು ಆಯ್ತು, ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಕೂಡ ‘ಫ್ರೀ ಕಾಶ್ಮೀರ’ ಬರಹಗಳು ರಾರಾಜಿಸುತ್ತಿವೆ. ಅಲ್ಲದೇ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಆರ್ ಎಸ್ ಎಸ್ ವಿರುದ್ಧವೂ ಬರಹಗಳನ್ನು ಬರೆಯಲಾಗಿದೆ.

ಬೆಂಗಳೂರಿನ ಚರ್ಚ್ ಸ್ಟ್ರೀಟ್ ನ ಅಂಗಡಿ ಶೆಟರ್ ಗಳ ಮೇಲೆ ರಾತ್ರಿ ಬೆಳಗಾಗುವಷ್ಟರಲ್ಲಿ ಕಿಡಿಗೇಡಿಗಳು ’ಫ್ರೀ ಕಾಶ್ಮೀರ’ ಬರಹ ಬರೆದಿದ್ದಾರೆ. ಚರ್ಚ್ ಸ್ಟ್ರೀಟ್ ನ ಪ್ರತಿ ಅಂಗಡಿ ಶೆಟರ್ ಮೇಲೂ ಈ ರೀತಿ ಬರೆಯಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧ, ಪ್ರಧಾನಿ ಮೋದಿ, ಅಮಿತ್ ಶಾ ರಾಜೀನಾಮೆ ನಿಡುವಂತೆಯೂ ಬರೆಯಲಾಗಿದೆ.

ನೋ ಎನ್ ಆರ್ ಸಿ, ನೋ ಸಿಎಎ, ಪ್ಯಾಸಿಸ್ಟ್ ಮೋದಿ ಡೈ ಎಂದೂ ಬರೆಯಲಾಗಿದೆ. ಅಲ್ಲದೇ ಸಿಎ ಎ, ಎನ್ ಆರ್ ಸಿಗೆ ವಿರೋಧ, ಆರ್ ಎಸ್ ಎಸ್ ಟೆರರಿಸ್ಟ್ ಎಂದು ಶೆಟರ್ ಗಳ ಮೇಲೆ ಕಿಡಿಗೇಡಿಗಳು ಬರೆದಿದ್ದಾರೆ.

ಚರ್ಚ್ ಸ್ಟ್ರೀಟ್ ನಲ್ಲಿ ’ಫೀ ಕಾಶ್ಮೀರ’ ಬರಹಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಮುಂದಾಗಿರುವ ಪೊಲೀಸರು ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button