Film & EntertainmentKannada NewsKarnataka News
*ಸಿನಿಮಾ ನಿರ್ಮಾಣಕ್ಕೆ ಗುಡ್ ಬೈ ಹೇಳಲಿದ್ದಾರಾ ನಟ ಧನಂಜಯ್? ಡಾಲಿ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಅಪಪ್ರಚಾರದಿಂದ ಬೇಸತ್ತಿದ್ದೇನೆ. ಮದರ್ ಪ್ರಾಮಿಸ್ ಸಿನಿಮಾದ ಬಗ್ಗೆ ಅಪಪ್ರಾಚಾರ ಮಾಡಲಾಗುತ್ತಿದೆ ಎಂದು ನಟ, ನಿರ್ಮಾಪಕರ ಡಾಲಿ ಧನಂಜಯ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ನಟ ಡಾಲಿ ಧನಂಜಯ್ ಅಪಪ್ರಾಚಾರ ಇದನ್ನೆಲ್ಲ ನೋಡಿ ಸಾಕಾಗಿದೆ. ಹೆಗ್ಗಣ ಮುದ್ದು ನನ್ನ ನಿರ್ಮಾಣದ ಕೊನೆಯ ಸಿನಿಮಾ ಅನಿಸುತ್ತದೆ ಎಂದು ತಿಳಿಸಿದ್ದಾರೆ.
ಎಲ್ಲರೂ ಸಿನಿಮಾ ಚೆನ್ನಾಗಿದೆ ಅಂದಾಗ ಕೆಲವರು ಬಂದು ಕೆಟ್ಟದಾಗಿ ಕಾಮೆಂಟ್ ಮಾಡುವುದು. ರೇಟಿಂಗ್ ಬೀಳುವ ಹಾಗೆ ಮಾಡುವುದು ಇತ್ಯಾದಿ ಕೆಲಸ ಮಾಡುತ್ತಿದ್ದಾರೆ. ಕೋಪವಿದ್ದರೆ ನನ್ನ ಮೇಲೆ ತೀರಿಸಿ, ಸಿನಿಮಾದ ಮೇಲಲ್ಲ ಎಂದು ಹೇಳಿದ್ದಾರೆ.



