Kannada NewsKarnataka NewsLatest
ಅರುಣ ಸಿಂಗ್ ತಂದಿರುವ ಸಂದೇಶ ನೋಡಿ ಸಂಪುಟ ವಿಸ್ತರಣೆ ಎಂದ ಸಿಎಂ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಹು ದಿನಗಳಿಂದ ಸುದ್ದಿಯಲ್ಲಿರುವ ಸಚಿವ ಸಂಪುಟ ವಿಸ್ತರಣೆ ಈಗಾಗಲೆ ಬೆಳಗಾವಿ ತಲುಪಿರುವ ಕರ್ನಾಟಕದ ಉಸ್ತುವಾರಿ ಅರುಣ ಸಿಂಗ್ ತಂದಿರುವ ಸಂದೇಶದ ಮೇಲೆ ಅವಲಂಭಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅರುಣ ಸಿಂಗ್ ಅವರು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಅವರು ಕೇಂದ್ರದಿಂದ ಏನು ಸಂದೇಶ ತಂದಿದ್ದಾರೆ ನೋಡಿ ಅದರಂತೆ ಸಚಿವಸಂಪುಟ ವಿಸ್ತರಣೆ ಸಂಬಂಧ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.
ಅರುಣ ಸಿಂಗ್ ಗೋವಾದ ಮೂಲಕ ಈಗಾಗಲೆ ಬೆಳಗಾವಿ ತಲುಪಿದ್ದಾರೆ. ಇಂದು ರಾತ್ರಿ 7.30ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ.
ಬೆಳಗಾವಿ ಜಿಲ್ಲಾ ವಿಭಜನೆ: ಜಾರಕಿಹೊಳಿ, ಯಡಿಯೂರಪ್ಪ ಪ್ರತಿಕ್ರಿಯೆ
ಅಧಿವೇಶನಕ್ಕೆ ಅಡ್ಡಿಯಾಗೋ ಕೊರೋನಾ ಕಾರ್ಯಕಾರಿಣಿಗಿಲ್ವ? -ಲಕ್ಷ್ಮಿ ಹೆಬ್ಬಾಳಕರ್ ಪ್ರಶ್ನೆ
ಕಾರ್ಯಕಾರಿಣಿ ಹೊತ್ತಿನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ



