Kannada NewsKarnataka NewsLatest

ದೇವಸ್ಥಾನ ಕಮಿಟಿಗೆ ಚೆಕ್ ಹಸ್ತಾಂತರಿಸಿದ ಲಕ್ಷ್ಮಿ ಹೆಬ್ಬಾಳಕರ್   

4 ಶಾಲಾ ಕೊಠಡಿ ನಿರ್ಮಾಣಕ್ಕೂ ಭೂಮಿ ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾವಿನಕಟ್ಟಿ ಗ್ರಾಮದ ಶ್ರೀ ರೇಣುಕಾಚಾರ್ಯ ದೇವಸ್ಥಾನವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಶಾಸಕರ ನಿಧಿಯ (MLA Fund) ವತಿಯಿಂದ​ 3.5 ಲಕ್ಷ ರೂ. ನೀಡಿದ್ದಾರೆ. ​ಇದರ ಪೈಕಿ ಮೊದಲ ಕಂತಿನಲ್ಲಿ ​2 ಲಕ್ಷ ರೂ,ಗಳ ಚೆಕ್ಕನ್ನು ದೇವಸ್ಥಾನದ ಕಮೀಟಿಯವರಿಗೆ​ ಬುಧವಾರ​ ಹಸ್ತಾಂತರಿಸಲಾಯಿತು.
​ಜೊತಗೆ 45 ಲಕ್ಷ ರೂ. ಲಕ್ಷ ರೂ,ಗಳ ವೆಚ್ಚದಲ್ಲಿ ಸರ್ಕಾರಿ‌ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗೆ ಹೊಸದಾಗಿ ​4 ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೂ ಸಹ ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ​ ತಾಲೂ​ಕು​ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಕಲ್ಲಪ್ಪ ರಾಮಚನ್ನವರ, ನೂತನವಾಗಿ ಆಯ್ಕೆಗೊಂಡಂತಹ ಗ್ರಾಮ ಪಂಚಾಯತ್ ಸದಸ್ಯರು, ನಿಲೇಶ ಚಂದಗಡ್ಕರ್, ದೇವಸ್ಥಾನದ ಕಮೀಟಿಯವರು​​ ಹಾಗೂ ಶಾಲಾ ಸಿಬ್ಬಂದಿ​ ಉಪಸ್ಥಿತರಿದ್ದರು.
​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button