Kannada NewsKarnataka NewsLatest

ಪಲ್ಲಕ್ಕಿ ಪೂಜೆ ನೆರವೇರಿಸಿದ ಚನ್ನರಾಜ ಹಟ್ಟಿಹೊಳಿ

​ ಪ್ರಗತಿವಾಹಿನಿ ಸುದ್ದಿ, ​ಹಿರೇಬಾಗೇವಾಡಿ – ಹಿರೇಬಾಗೇವಾಡಿ ಗ್ರಾಮದ ಪೇಟೆ ಓಣಿಯ ವಿನಾಯಕ ಗೆಳೆಯರ ಬಳಗದವರು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಪಡಿಬಸವೇಶ್ವರ ಪಲ್ಲಕ್ಕಿಯನ್ನು ತೆಗೆದುಕೊಂಡು ಶ್ರೀ ಉಳವಿಯ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.
ಇವತ್ತು ಗೆಜಪತಿ ಗ್ರಾಮದ ಮುಖಾಂತರ ತೆರಳುವ ಸಮಯದಲ್ಲಿ ​ಹರ್ಷ ಶುಗರ್ ಫ್ಯಾಕ್ಟರಿ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಪಲ್ಲಕ್ಕಿಯ  ಪೂಜೆಯನ್ನು ನೆರವೇರಿಸಿ, ​ಸ್ವಲ್ಪ ದೂರ ಹೊತ್ತು ಸಾಗಿದರು. ಜೊತೆಗೆ​​ ಅನ್ನಪ್ರಸಾದಕ್ಕೆ ದೇಣಿಗೆಯನ್ನು ನೀಡಿದ​ರು​.
​ ಉಳವಿ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ಕೈಗೊಂಡಿರುವ ಎಲ್ಲ ಭಕ್ತಾಧಿಗಳಿಗೆ ಶುಭವಾಗಲೆಂದು​ ಅವರು​ ಪ್ರಾರ್ಥಿಸಿ, ಹಾರೈಸಿದ​ರು​.
​ ಈ ಸಂದರ್ಭದಲ್ಲಿ ಭಕ್ತಾಧಿಗಳು,​ ಗ್ರಾದ ಮುಖಂಡರಾದ​ ಅಡಿವೇಶ ಇಟಗಿ, ಸುರೇಶ ಇಟಗಿ, ಆನಂದ ಪಾಟೀಲ, ರಾಜು ಮೇಳೆದ, ಸಿದ್ದಣ್ಣ ಹಾವಣ್ಣವರ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button