Latest

ಬೊಮ್ಮಾಯಿ ಸಂಪುಟದ ನೂತನ ಸಚಿವರ ಪಟ್ಟಿ: ಕತ್ತಿ, ಜೊಲ್ಲೆಗೂ ಸ್ಥಾನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ ಇಂದು ಅಸ್ತಿತ್ವಕ್ಕೆ ಬರಲಿದ್ದು, ಮಧ್ಯಾಹ್ನ 2:15ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.

ಶಶಿಕಲಾ ಜೊಲ್ಲೆಗೆ ಮುಖ್ಯಮಂತ್ರಿಗಳಿಂದ ಕರೆ ಬಂದಿದೆ. ಅವರೇ ಸ್ವತಃ ಪ್ರಗತಿವಾಹಿನಿಗೆ ಖಚಿತಪಡಿಸಿದ್ದಾರೆ. ಉಮೇಶ ಕತ್ತಿಗೂ ಕರೆ ಬಂದಿರುವುದಾಗಿ ಮಾಹಿತಿ ಬಂದಿದೆ. ಬಾಲಚಂದ್ರ ಜಾರಕಿಹೊಳಿ ಅವರಿಗೆ ಕರೆ ಬಂದಿರುವ ಕುರಿತು ಅವರು ಈವರೆಗೂ ಖಚಿತಪಡಿಸಿಲ್ಲ.

ಸಿಎಂ ಬೊಮ್ಮಾಯಿ ಖುದ್ದು ಕರೆ ಮಾಡಿ ನೂತನ ಸಚಿವರಿಗೆ ಪ್ರಮಾಣವಚನ ಸ್ವೀಕಾರಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಈಗಾಗಲೇ ವಿ.ಸೋಮಣ್ಣ, ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು ಸೇರಿದಂತೆ ಹಲವರಿಗೆ ಕರೆ ಮಾಡಿದ್ದು, ಬೊಮ್ಮಾಯಿ ಸಂಪುಟ ಸೇರಲಿರುವ ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ.

ಫೋನ್ ಕರೆ ಬಂದವರ ಪಟ್ಟಿ:
ಗೋವಿಂದ ಕಾರಜೋಳ
ಬಿ.ಸಿ.ಪಾಟೀಲ್
ಕೆ.ಎಸ್.ಈಶ್ವರಪ್ಪ
ಬಿ.ಶ್ರೀರಾಮುಲು
ಎಸ್.ಅಂಗಾರ
ಭೈರತಿ ಬಸವರಾಜ್
ಉಮೇಶ್ ಕತ್ತಿ

Home add -Advt

ಶಶಿಕಲಾ ಜೊಲ್ಲೆ
ಡಾ.ಕೆ.ಸುಧಾಕರ್
ಅರವಿಂದ ಲಿಂಬಾವಳಿ
ಆನಂದ್ ಸಿಂಗ್
ವಿ.ಸೋಮಣ್ಣ
ಎಸ್.ಟಿ.ಸೋಮಶೇಖರ್
ಮುನಿರತ್ನ

ಕೆ.ಗೋಪಾಲಯ್ಯ
ಸುನೀಲ್ ಕುಮಾರ್

ಪ್ರಭು ಚೌವ್ಹಾಣ್
ಶಂಕರ ಪಾಟೀಲ್ ಮುನೇನಕೊಪ್ಪ
ಮುರುಗೇಶ್ ನಿರಾಣಿ
ಸತೀಶ್ ರೆಡ್ದಿ

 

Related Articles

Back to top button