Latest

ಹುಕ್ಕೇರಿ ಸ್ವಾಮಿಗಳಿಗೆ ಗಂಡುಗಲಿ ಕುಮಾರರಾಮ ಪ್ರಶಸ್ತಿ

 

 

Home add -Advt

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕಂಪ್ಲಿಯ ಕನ್ನಡ ಹಿತರಕ್ಷಕ ಸಂಘ ನೀಡುವ ಗಂಡುಗಲಿ ಕುಮಾರರಾಮ ಪ್ರಶಸ್ತಿಗೆ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳನ್ನು ಆಯ್ಕೆಮಾಡಲಾಗಿದ್ದು, ಬುಧವಾರ ಸಂಜೆ ಕಂಪ್ಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗಡಿಭಾಗದಲ್ಲಿ ಕನ್ನಡ ಭಾಷೆ ಕಟ್ಟುವ ವಿಶಿಷ್ಠ ಸೇವೆ, ಸಾಹಿತ್ಯ ಸೇವೆ, ರೈತ ಸೇವೆ ಮತ್ತು ಕನ್ನಡ ಶಾಲೆಯ 60 ಸಾವಿರ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಮಾಡುತ್ತಿರುವುದನ್ನು ಪರಿಗಣಿಸಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸ್ವಾಮಿಗಳು ಸಹಸರರು ಕನ್ನಡಾಭಿಮಾನಿಗಳಿಗೆ ಹೋಳಿಗೆ ಊಟ ಬಡಿಸುವ ಮೂಲಕ ಕನ್ನಡಾಭಿಮಾನ ತೋರುತ್ತಿದ್ದಾರೆ.

ಬುಧವಾರ ಸಂಜೆ ಕಂಪ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯ ಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಿ, ಹುಕ್ಕೇರಿಯ ಹಿರೇಮಠದ ಕಾರ್ಯ ಕನ್ನಡದ ಕಾರ್ಯವಾಗಿ ಹೊರಹೊಮ್ಮಿದೆ. ಕಂಪ್ಲಿ ಕನ್ನಡ ಸಂಘ ಹುಕ್ಕೇರಿ ಶ್ರೀಗಳಿಗೆ ಪ್ರಶಸ್ತಿ ನೀಡುವ ಮೂಲಕ ಕನ್ನಡದ ಪ್ರತಿಯೊಬ್ಬರಿಗೂ ಅಭಿಮಾನ ಮೂಡಿಸಿದೆ ಎಂದರು.

ಸ್ಥಳೀಯ ಪುರಸಭೆ ಅಧ್ಯಕ್ಷ ಎಂ.ಸುಧೀರ, ಆಯುಷ್ ಅಧಿಕಾರಿ ಡಾ.ಸಂಗಮೇಶ ಲಹಾಳ, ಕಂಪ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಗುಡಿ ವಿಶ್ವನಾಥ, ವೀರೇಶ ಗಾಣಿಗೇರ ಮೊದಲಾವರು ಇದ್ದರು.

 

 

Related Articles

Back to top button