Latest

ಶ್ರೀಲಂಕಾ ಸ್ಫೋಟದಲ್ಲಿ ಕನ್ನಡ ನಟಿ ಸ್ವಲ್ಪದರಲ್ಲಿ ಪಾರು

ಪ್ರಗತಿವಾಹಿನಿ ಸುದ್ದಿ, ಕೊಲಂಬೊ

ಕನ್ನಡ ಹಾಗೂ ತಮಿಳು ನಟಿ ರಾಧಿಕಾ ಶರತ್ ಕುಮಾರ ಶ್ರೀಲಂಕಾ ಸ್ಫೋಟದಲ್ಲಿ ಸ್ವಲ್ಪದರಲ್ಲಿ ಪಾರಾಗಿದ್ದಾರೆ.

ಈ ಕುರಿತು ಅವರೇ ಟ್ವೀಟ್ ಮಾಡಿ, ತಾವು ಸ್ವಲ್ಪದರಲ್ಲಿ ಪಾರಾದ ಶಾಕಿಂಗ್ ಸುದ್ದಿ ತಿಳಿಸಿದ್ದಾರೆ.

ಕರ್ನಾಟಕದ ಇಬ್ಬರು ಸೇರಿ ಶ್ರೀಲಂಕಾ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 200ಕ್ಕೂ ಹೆಚ್ಚು

Home add -Advt

ಸಧ್ಯ ಕನ್ನಡದ ಯುವರತ್ನ ಚಿತ್ರದಲ್ಲಿ ನಟಿಸುತ್ತಿರುವ ರಾಧಿಕಾ ಕೊಲಂಬೊದ ಸಿನ್ನಮೊಂಗ್ರ್ಯಾಂಡ್ ಹೊಟೆಲ್ ನಲ್ಲಿ ಉಳಿದುಕೊಂಡಿದ್ದರು. ಅವರು ಹೊಟೆಲ್ ನಿಂದ ತೆರಳಿದ ಕೆಲವೇ ಕ್ಷಣಗಳಲ್ಲಿ ಅಲ್ಲಿ ಪ್ರಬಲ ಬಾಂಬ್ ಸ್ಫೋಟವಾಗಿದೆ. ರಾಧಿಕಾ ಸ್ಫೋಟ ಸಂಭವಿಸಿದ ಚರ್ಚ್ ಗಳಿಗೂ ಹೋಗುತ್ತಿದ್ದರು. ಆದರೆ ಇಂದು ಹೋಗಿರಲಿಲ್ಲ. 

Related Articles

Back to top button