
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೈಲು ಮಾರ್ಗ ದುರಸ್ಥಿ ಹಿನ್ನೆಲೆಯಲ್ಲಿ ಯಲಹಂಕ-ಪೆನುಕೊಂಡ ಮಾರ್ಗದ ಹಲವು ರೈಲುಗಳನ್ನು ರದ್ದುಪಡಿಸಲಾಗಿದ್ದಎ ಇನ್ನು ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಮಾರ್ಚ್ 29ರವರೆಗೆ ಪೆನುಕೊಂಡ ಮಾರ್ಗದಲ್ಲಿ 10ಕ್ಕೂ ಹೆಚ್ಚು ರೈಲುಗಳನ್ನು ರದ್ದುಪಡಿಸಲಾಗಿದೆ. 14 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಯಲಹಂಕ-ಪೆನುಕೊಂಡ ಮಾರ್ಗದಲ್ಲಿ ಬಿದ್ಯುದೀಕರಣ ಮತ್ತು ದ್ವಿಪಥ ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.
ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರಿಗೆ ಮಾರ್ಗ ಬದಲಾವಣೆ ಕುರಿತು ಎಸ್ಎಂಎಸ್ಗಳನ್ನು ಕಳಿಸಲಾಗಿದೆ. ಅಂತರ ಹೆಚ್ಚಾಗುವ ಕಾರಣ ಪ್ರಯಾಣದ ಅವಧಿಯೂ ಹೆಚ್ಚಾಗಲಿದೆ. ಇಂಥವರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಹೆಚ್ಚುವರಿಯಾಗಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ರದ್ದುಪಡಿಸುವ ಟಿಕೆಟ್ಗಳಿಗೆ ನಿಯಮಗಳ ಪ್ರಕಾರ ಹಣವನ್ನು ರಿಫಂಡ್ ಮಾಡಲಾಗುವುದು ಎಂದು ರೈಲ್ವೆ ಇಲಾಖೆಯ ವಾಣಿಜ್ಯ ವಿಭಾಗ ತಿಳಿಸಿದೆ.
ರದ್ದಾದ ರೈಲುಗಳು
1) ಧರ್ಮಾವರಂ-ಬೆಂಗಳೂರು ಕಂಟೋನ್ಮೆಂಟ್ ಮೆಮು
2) ಸಿಕಂದ್ರಾಬಾದ್-ಯಶವಂತಪುರ ಗರೀಬ್ರಥ್ ಎಕ್ಸ್ಪ್ರೆಸ್
3) ಮುಂಬೈ-ಬೆಂಗಳೂರು ಉದ್ಯಾನ್ ಎಕ್ಸ್ಪ್ರೆಸ್
4) ಸೊಲ್ಲಾಪುರ-ಹಾಸನ ಡೈಲಿ ಎಕ್ಸ್ಪ್ರೆಸ್
5) ಯಶವಂತಪುರ-ಡಾ.ಅಂಬೇಡ್ಕರ್ ನಗರ ವೀಕ್ಲಿ ಎಕ್ಸ್ಪ್ರೆಸ್
7) ಗುಂತಕಲ್-ಹಿಂದೂಪುರ ಮೆಮು
8) ಮಚಲೀಪಟ್ಟಣಂ-ಯಶವಂತಪುರ ಎಕ್ಸ್ಪ್ರೆಸ್
9) ಭುವನೇಶ್ವರ-ಬೆಂಗಳೂರು ಪ್ರಶಾಂತಿ ಎಕ್ಸ್ಪ್ರೆಸ್
10) ಕಾಚಿಗುಡ-ಯಲಹಂಕ
11) ಚೆನ್ನೈ-ಸತ್ಯಸಾಯಿ ಪ್ರಶಾಂತಿ ನಿಲಯಂ ವೀಕ್ಸಲಿ ಎಕ್ಸ್ಪ್ರೆಸ್
ಈ ಮಾರ್ಗದಲ್ಲಿ ಸಂಚರಿಸುವ 14 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರು ಸಮೀಪದ ರೈಲ್ವೆ ನಿಲ್ದಾಣದಿಂದ ಮಾಹಿತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ.