Latest

ರೈಲ್ವೆ ಹಳಿ ಮೇಲೆ ಮಲಗ್ಗಿದ್ದವನನ್ನು ರಕ್ಷಿಸಲು ಹೋಗಿ ತಾನೇ ರೈಲಿನಡಿ ಸಿಲುಕಿದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ರೈಲ್ವೆ ಹಳಿ ಮೇಲೆ ಮಲಗಿದ್ದ ವ್ಯಕ್ತಿಯೋರ್ವನನ್ನು ರಕ್ಷಿಸಲು ಹೋದ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ರೈಲು ನಿಲ್ದಾಣದಲ್ಲಿ ನಡೆದಿದೆ.

54 ವರ್ಷದ ನಾರಾಯಣ ಮೃತ ವ್ಯಕ್ತಿ. ಶಿಡ್ಲಘಟ್ಟ ರೈಲು ನಿಲ್ದಾಣದಲ್ಲಿ ರೈಲ್ವೆ ಹಳಿ ಮೇಲೆ ಮಲಗಿದ್ದ ಸಾದಿಕ್ ಎಂಬಾತನನ್ನು ರಕ್ಷಿಸಲು ನಾರಾಯಣ ಎಂಬುವವರು ಮುಂದಾಗಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ನಾರಾಯಣ ಅವರ ಮೇಲೆ ಹರಿದಿದೆ. ಸಣ್ಣಪುಟ್ಟ ಗಾಯಗಳಿಂದ ಸಾದಿಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Home add -Advt

ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಿಜಾಬ್ ಬೆನ್ನಲ್ಲೇ ರಾಜ್ಯದಲ್ಲಿ ಆರಂಭವಾದ ಹಲಾಲ್ ವಿವಾದ; ಏನಿದು ಹಲಾಲ್-ಜಟ್ಕಾ ಕಟ್?

Related Articles

Back to top button