Kannada NewsKarnataka News

ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಶ್ರೀಮಂತ ಪಾಟೀಲ ಸಭೆ

ಪ್ರಗತಿವಾಹಿನಿ ಸುದ್ದಿ, ಕಾಗವಾಡ –  ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಲವಾರು ಗ್ರಾಮಗಳಿಗೆ ಬೇಸಿಗೆ ಕಾಲದಲ್ಲಿ ಸರಿಯಾಗಿ *ಶುದ್ಧ ಕುಡಿಯುವ ನೀರನ್ನು* ಪೂರೈಸುವ ಉದ್ದೇಶದಿಂದ *ಕುಡಿಯುವ ನೀರು ಸರಬರಾಜು* ಇಲಾಖೆಯ ಅಧಿಕಾರಿಗಳೊಂದಿಗೆ *ಕಾಗವಾಡ ಮತಕ್ಷೇತ್ರದ   ಶಾಸಕರು ಹಾಗೂ ಮಾಜಿ ಸಚಿವರಾದ  ಶ್ರೀಮಂತ (ತಾತ್ಯಾ) ಪಾಟೀಲ* ಅವರು ಸಭೆ ನಡೆಸಿದರು.
 *ಮದಭಾವಿ, ಬಳ್ಳಿಗೇರಿ, ಕೆಂಪವಾಡ ಹಾಗೂ ತಂಗಡಿ – ಕವಲಗುಡ್ಡ ಮಲ್ಟಿ ವಿಲೇಜ್* ವ್ಯಾಪ್ತಿಯಲ್ಲಿ ಬರುವ *ಪ್ರತಿಯೊಂದು ಗ್ರಾಮಗಳಿಗೂ ಮಲ್ಟಿ ವಿಲೇಜ್ ಮೂಲಕ ಬೇಸಿಗೆ ಕಾಲದಲ್ಲಿ ಸರಿಯಾಗಿ ಶುದ್ಧ ಕುಡಿಯುವ ನೀರನ್ನು* ಪೂರೈಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾದ  ಎ ಜೆ ಬನಕಾರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾದ  ವಿ ಎಸ್ ಹಿರೇಮಠ,  ಎಲ್ ಎಸ್ ಗೋಳಸಂಗಿ,  ಎನ್ ಬಿ ಚಿಪ್ಪರಗಿ,  ಆರ್ ಡಿ ಕಿತ್ತೂರ,  ಬಸವರಾಜ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button