
ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಈನಡುವೆ ಭಾರಿ ವರ್ಷಧಾರೆಗೆ ರಾಜ್ಯ ಹೆದ್ದರಾಯೇ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಶೃಂಗೇರಿಯ ನೇರಳೆಕೊಡಿಗೆ ಬಳಿ ನಡೆದಿದೆ. ಹೆದ್ದಾರಿ ಸಂಪೂರ್ಣವಾಗಿ ಕುಸಿದಿದ್ದು, ಸಂಚಾರ ಮಾರ್ಗ ಬಂದ್ ಆಗಿದೆ.
ಸುಮಾರು 100 ಅಡಿಗಳಷ್ಟು ರಸ್ತೆ ಮಾರ್ಗ ಕುಸಿದಿದೆ. ಶೃಂಗೇರಿ ಹಾಗೂ ಆಗುಂಬೆ ಮಾರ್ಗ ಸಂಪೂರ್ಣ ಬಂದ್ ಆಗಿದ್ದು ಸಂಪರ್ಕವೇ ಕಡಿತಗೊಂಡಿದೆ.
ಕೋವಿಡ್ ಬೆನ್ನಲ್ಲೇ ಶಾಲಾ ಮಕ್ಕಳಲ್ಲಿ ಕಂಡು ಬರುತ್ತಿದೆ ಹೊಸ ರೋಗ