Kannada NewsKarnataka News

75 ವರ್ಷದ ನಂತರ ಈ ಹಳ್ಳಿಗರಿಗೆ ಸ್ವಾತಂತ್ರ್ಯ ಬಂತು! Thanks to Dr.Sonali Sarnobat

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ, ಅಮೃತಮಹೋತ್ಸವದ ಸಂದರ್ಭದಲ್ಲಿ ಖಾನಾಪುರ ತಾಲೂಕಿನ 23 ಹಳ್ಳಿಗಳ ಜನರು ನಿಜವಾದ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ.

ಇಲ್ಲಿದೆ 23 ಹಳ್ಳಿಗಳ ವಿವರವನ್ನೊಳಗೊಂಡ ಆದೇಶ ಪತ್ರ

ಖಾನಾಪುರ ತಾಲೂಕಿನ ಈ ಹಳ್ಳಿಗಳ ಜನರು ಈವರೆಗೂ ಪಡಿತರಕ್ಕಾಗಿ ಪರದಾಡುತ್ತಿದ್ದರು. ಎಷ್ಟೋ ದೂರ ಹೋಗಿ ಪಡಿತರ ಪಡೆಯಬೇಕಾದ ಅನಿವಾರ್ಯತೆ ಅವರಿಗಿತ್ತು.ಸುದ್ದಿ ತಿಳಿಯುವ ಹೊತ್ತಿಗೆ ಪಡಿತರ ಖಾಲಿಯಾಗಿರುತ್ತಿತ್ತು. ಪಡಿತರ ಸಿಕ್ಕಿದರೂ ಅದನ್ನು ಸಾಗಿಸಲು ಪರದಾಡಬೇಕಿತ್ತು. ಪಡಿತರ ಅಂಗಡಿಗಳ ಕಿರುಕುಳ ಅನುಭವಿಸಬೇಕಿತ್ತು.

Home add -Advt

ಈಗ ಇದಕ್ಕೆಲ್ಲ ಮುಕ್ತಿ ಸಿಕ್ಕಿದೆ. ಬಿಜೆಪಿ ಬೆಳಗಾವಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ, ಖಾನಾಪುರ ತಾಲೂಕು ಉಸ್ತುವಾರಿ ಡಾ.ಸೋನಾಲಿ ಸರ್ನೋಬತ್ ಪಟ್ಟು ಬಿಡದೆ ಈ ಎಲ್ಲ ಹಳ್ಳಿಗಳ ಜನರಿಗೆ ಹತ್ತಿರದ ಕೇಂದ್ರದಲ್ಲೇ ಪಡಿತರ ವಿತರಣೆಗೆ ಆದೇಶ ಹೊರಡಿಸಿಕೊಂಡು ಬಂದಿದ್ದಾರೆ.

23 ಹಳ್ಳಿಗಳ ಜನರಿಗೆ ಸಮೀಪದ 8 ಕೇಂದ್ರಗಳನ್ನು ಗುರುತಿಸಿ ಪ್ರತಿ ತಿಂಗಳು ಪಡಿತರ ಹಂಚುವ ವ್ಯವಸ್ಥೆ ಮಾಡಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆದೇಶ ಹೊರಡಿಸಿದೆ. ಸೋನಾಲಿ ಸರ್ನೋಬತ್ ಅವರ ಪತ್ರವನ್ನು ಉಲ್ಲೇಖಿಸಿ ಆದೇಶ ಹೊರಡಿಸಲಾಗಿದೆ. ಸಚಿವ ಉಮೇಶ ಕತ್ತಿ ಅವರ ಮೂಲಕ ಪ್ರಯತ್ನ ಮಾಡಿ ಈ ಆದೇಶ ಹೊರಡಿಸುವಲ್ಲಿ ಸೋನಾಲಿ ಸರ್ನೋಬತ್ ಯಶಸ್ವಿಯಾಗಿದ್ದಾರೆ.

ಇಲ್ಲಿಯವರೆಗೂ ಇಲ್ಲಿನ ಜನಪ್ರತಿನಿಧಿಗಳು ಕೇವಲ ಓಟ್ ಬ್ಯಾಂಕ್ ಆಗಿ ಇಲ್ಲಿನ ಜನರನ್ನು ಬಳಸಿಕೊಳ್ಳುತ್ತಿದ್ದರು. ಅವರು ಮೂಲಭೂತ ಸೌಲಭ್ಯ ಒದಗಿಸುವ ಪ್ರಯತ್ನ ನಡೆದೇ ಇಲ್ಲ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.

ಈ ಹಿಂದೆ ಕೂಡ ಅನೇಕ ಹಳ್ಳಿಗಳಿಗೆ ಮನೆ ಬಾಗಿಲಿಗೇ ಪಡಿತರ ಸಿಗುವಂತೆ ಮಾಡುವಲ್ಲಿ ಸೋನಾಲಿ ಸರ್ನೋಬತ್ ಯಶಸ್ವಿಯಾಗಿದ್ದು ಇಲ್ಲಿ ಉಲ್ಲೇಖನೀಯ. ಈ ಕುರಿತ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ –

ಮನೆ ಬಾಗಿಲಿಗೆ ಪಡಿತರ ಯೋಜನೆ ಸಾಕಾರಗೊಳಿಸಿದ ಡಾ.ಸೋನಾಲಿ ಸರ್ನೋಬತ್

ಖಾನಾಪುರ ಕುಗ್ರಾಮಗಳಿಗೆ ಪಡಿತರ ವಿತರಣೆ ಕಲ್ಪಿಸಲು ಯಶಸ್ವಿಯಾದ ಡಾ. ಸೋನಾಲಿ ಸರ್ನೋಬತ್

 

Related Articles

Back to top button