Kannada NewsKarnataka News
ಉದ್ಯಮ ವಲಯಕ್ಕೆ ಆಶಾದಾಯಕ ಬಜೆಟ್ -ಪಾಂಡುರಂಗ ರಡ್ಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಕೇಂದ್ರ ಸರಕಾರದ ಪ್ರಸ್ತುತ ಬಜೆಟ್ ಉದ್ಯಮ ವಲಯಕ್ಕೆ ಆಶಾದಾಯಕವಾಗಿದೆ ಎಂದು ಎಂ ಸ್ಯಾಂಡ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಪಾಂಡುರಂಗ ರಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಹೊಸದಾಗಿ ಬಿಸಿನೆಸ್ ಆರಂಭಿಸುವವರಿಗೆ ಹಲವು ಉತ್ತೇಜನದಾಯಕ ಅಂಶಗಳು ಇವೆ. ಆರ್ಥಿಕ ಸುಧಾರಣೆಗೆ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ. ಹಲವು ವರ್ಷಗಳ ನಂತರ ದೇಶ ಇಂತಹ ಒಳ್ಳೆಯ ಬಜೆಟ್ ಕಂಡಂತಾಗಿದೆ ಎಂದು ಅವರು ತಿಳಿಸಿದ್ದಾರೆ.




