Kannada NewsKarnataka News

*ನಡು ರಸ್ತೆಯಲ್ಲೆ ಲಾಂಗ್ ಹಿಡಿದು‌ ರಂಪಾಟ ನಡೆಸಿದ ಯುವಕ * 

ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಹಾಡಹಗಲೇ ನಡು ರಸ್ತೆಯಲ್ಲೇ ಲಾಂಗ್ ಬಿಸಿ ಯುವಕನೋರ್ವ ಹುಚ್ಚಾಟ ಮೇರೆದಿರುವ ಘಟನೆ ನಡೆದಿದೆ. 

ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕನು ಲಾಂಗ್ ಹಿಡಿದು ಗಾಡಿ ನಿಲ್ಸೋ ನಮ್ಮ ತಮ್ಮನಿಗೆ ಅಪಘಾತವಾಗಿದೆ ಎಂದು ಕೂಗಾಡುತ್ತಾ ರಂಪಾಟ ಮಾಡಿದ್ದಾನೆ. ಬಳಿಕ ಆ ಯುವಕನನ್ನು ಹಿಂಬಾಲಿಸಿದ ಕೆಲ ಸ್ಥಳೀಯ ಯುವಕರ ಗುಂಪೊಂದು, ಅವನ ಕೈಯಲ್ಲಿದ್ದ ಲಾಂಗ್​​ ಅನ್ನು ಕಿತ್ತುಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ನಂತರ ಲಾಂಗ್​​ ಅನ್ನು ರಸ್ತೆ ಪಕ್ಕದ ಕೆರೆಯಲ್ಲಿ ಎಸೆದಿದ್ದಾರೆ. ಘಟನೆಯಿಂದ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದು, ಘಟನೆಯ ಸಂಪೂರ್ಣ ದೃಶ್ಯ ಮೊಬೈಲ್​​ನಲ್ಲಿ ಸೆರೆಯಾಗಿದೆ. ಲಾಂಗ್​​ ಹಿಡಿದು ಹುಚ್ಚಾಟ ಮಾಡಿದ್ದ ಯುವಕನನ್ನು ಸದ್ಯ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button