Kannada NewsKarnataka NewsLatest
ಗಿಡಕ್ಕೆ ಡಿಕ್ಕಿ ಹೊಡೆದ ಕ್ರೂಸರ್

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ:
ತಾಲೂಕಿನ ಜಿನರಾಳ ಕ್ರಾಸ್ ಹತ್ತಿರ ಕ್ರೂಸ್ರ ನಿಯಂತ್ರಣ ತಪ್ಪಿ ರಸ್ತೆಬದಿಯಿರುವ ಗಿಡಕ್ಕೆ ಡಿಕ್ಕಿಹೊಡೆದು ಪರಿಣಾಮವಾಗಿ ಅದರಲ್ಲಿದ್ದ ೧೫ ಜನರಿಗೆ ತ್ರೀವ್ರ ಗಭೀರ ಗಾಯಗೊಂಡಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ.
ತಾಲೂಕಿನ ಯರನಾಳ ಗ್ರಾಮದಲ್ಲಿ ಜರುಗುತ್ತಿರುವ ಚಾತುರ್ಮಾಸದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶ್ರಾವಕಿಯರು ಪ್ರಯಾಣಿಸುತ್ತಿದ್ದರು.
ಕೆಲವರಿಗೆ ಕೈಕಾಲು ಮೂಳೆ ಮುರಿದಿವೆ ಎನ್ನಲಾಗಿದೆ. ಯಮಕಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




