Karnataka NewsLatest

*ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾದ ಟಿಪ್ಪರ್: ಐವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಟಿಪ್ಪರ್ ಟೈರ್ ಬ್ಲಾಸ್ಟ್ ಆದ ಪರಿಣಾಮ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ‌ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಹೊನ್ಯಾಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ನಡೆದಿದೆ.

ರವಿವಾರ ರಾತ್ರಿ ಹೊನ್ಯಾಳ ಗ್ರಾಮದಲ್ಲಿ ಟಿಪ್ಪರ್ ನ ಟೈರ್ ಬ್ಲಾಸ್ಟ್ ಆದ ಪರಿಣಾಮ ಟಿಪ್ಪರ್ ಪಾದಾಚಾರಿಗಳ‌ ಮೇಲೆ ಉರುಳಿದ್ದು,  ಒಂದೇ ಕುಟುಂಬದ ಐವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.‌ ಮೃತರು ಬಾದರದಿನ್ನಿ ಗ್ರಾಮದವರು ಎನ್ನಲಾಗಿದೆ.‌

ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಬರುವಾಗ‌ ದುರ್ಘಟನೆ ಸಂಭವಿಸಿದ್ದು, ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದರು. ಆಗ ಗರಸು ತುಂಬಿದ ಟಿಪ್ಪರ್ ನ ಮುಂದಿನ ಟೈರ್ ಬ್ಲಾಸ್ಟ್ ಆಗಿ ನಡೆದುಕೊಂಡು ಹೊರಟಿದ್ದವರ ಮೇಲೆ ಟಿಪ್ಪರ್ ಬಿದ್ದಿದೆ.‌ ಯಂಕಪ್ಪ ಶಿವಪ್ಪ ತೋಳಮಟ್ಟಿ (70), ಯಲ್ಲವ್ವ ಯಂಕಪ್ಪ ತೋಳಮಟ್ಟಿ(ಪತ್ನಿ) (60), ಪುಂಡಲೀಕ್ ಯಂಕಪ್ಪ ತೋಳಮಟ್ಟಿ(ಮಗ) (35), ಅಶೋಕ ನಿಂಗಪ್ಪ ಬಮ್ಮಣ್ಣವರ(ಅಳಿಯ- ಮಗಳ ಗಂಡ) (50) ನಾಗವ್ವ ಅಶೋಕ ಬಮ್ಮಣ್ಣವರ( ಯಂಕಪ್ಪ ಅವರ ಮಗಳು)(45) ಮೃತರು. 

ಸ್ಥಳಕ್ಕೆ ಬೀಳಗಿ ಪೊಲೀಸರು ದೌಡಾಯಿಸಿ  ಪರಿಶೀಲನೆ ನಡೆಸಿದ್ದಾರೆ.‌ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್ ಪಿ ಅಮರನಾಥ್ ರೆಡ್ಡಿ ಭೇಟಿ ನೀಡಿದ್ದಾರೆ.‌

Related Articles

Back to top button