Belagavi NewsBelgaum NewsEducationKannada NewsKarnataka News

*ನಿಷ್ಠೆ, ನಿಯಮಗಳಿಲ್ಲದ ಕೆಲಸ ಕೆಲಸವಲ್ಲ :ಸಂಜಯ್ ದನ್ವಂತ್* *ಅಂಗಡಿ ಇಂಟರ್ ನ್ಯಾಷನಲ್ ಶಾಲೆಯ ಪದಗ್ರಹಣ ಸಮಾರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ರೂವಾರಿಗಳು, ನಿರಂತರ ಕರ್ತವ್ಯದಲ್ಲಿ ನಿತ್ಯ ಶಾಂತಿ ಇದೆ. ನಿಷ್ಠೆ, ನಿಯಮಗಳಿಲ್ಲದ ಕೆಲಸ ಕೆಲಸವಲ್ಲ.  ಲಾಭಕ್ಕಿಂತಲೂ ಕರ್ತವ್ಯ ಮುಖ್ಯ, ಜಯಕ್ಕಿಂತಲೂ ಸಾಧನೆ ಮುಖ್ಯ, ಫಲಕ್ಕಿಂತಲೂ ಶ್ರಮ ಮುಖ್ಯ, ಮಾತಿಗಿಂತ ಕೃತಿ ಮುಖ್ಯ ಎಂದು ಗೃಹ ಸಚಿವಾಲಯದ ಮಾಜಿ ಸಹಾಯಕ ಕಮಾಂಡೇಂಟ್ ಸಿ. ಆರ್. ಪಿ. ಸಂಜಯ್ ದನ್ವಂತ್ ಹೇಳಿದರು. 

ಅವರು ಬೆಳಗಾವಿಯ ಅಂಗಡಿ ಇಂಟರ್ ನ್ಯಾಷನಲ್ ಸ್ಕೂಲಿನ 2025- 26 ನೇ ಸಾಲಿನ ಶೈಕ್ಷಣಿಕ ವರ್ಷದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ಅಂಗಡಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷೆ ಹಾಗೂ ಮಾಜಿ ಸಂಸದೆ ಮಂಗಲಾ ಸುರೇಶ ಅಂಗಡಿ ವಹಿಸಿದ್ದರು. ಗೌರವ ಅತಿಥಿಗಳಾಗಿ ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಅಂಗಡಿ ಪಾಟೀಲ ಆಗಮಿಸಿದ್ದರು.

ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿ ಸಚಿವ ಸಂಪುಟದಲ್ಲಿ ವಿದ್ಯಾರ್ಥಿ ನಾಯಕ, ವಿದ್ಯಾರ್ಥಿ ನಾಯಕಿ, ಕ್ರೀಡಾ ಸಚಿವ, ಸಾಂಸ್ಕೃತಿಕ ಸಚಿವರು, ಶಿಸ್ತು ಸಚಿವರು, ಮಾಹಿತಿ ತಂತ್ರಜ್ಞಾನ ಸಚಿವರು, ಶಿಕ್ಷಣ ಸಚಿವರು ಈ ರೀತಿಯಾಗಿ ಅನೇಕ ಸಚಿವರನ್ನು ನೇಮಕ ಮಾಡಲಾಯಿತು. ಸಚಿವ ಸಂಪುಟದ ಮುಖ್ಯ ನಾಯಕನಾಗಿ ನೇಮಕಗೊಂಡ ಕುಮಾರ ಅಭಯ್ ಯಲಟ್ಟಿ ಸಚಿವ ಸಂಪುಟದ ಎಲ್ಲ ಸದಸ್ಯರಿಗೂ  ತಮ್ಮ ಕಾರ್ಯಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನೆರವೇರಿಸಿಕೊಂಡು ಹೋಗುವಂತೆ ಪ್ರಮಾಣವಚನವನ್ನು ಸ್ವೀಕರಿಸಲು ಸಹಕರಿಸಿದನು.

Home add -Advt

ಸ್ಕೂಲಿನ ಪ್ರಾಚಾರ್ಯೆ ಪ್ರೊ. ಸಂಗೀತಾ ದೇಸಾಯಿ ಅವರು ಮಕ್ಕಳನ್ನು ಉದ್ದೇಶಿಸಿ ನಾಯಕತ್ವದ ಮೌಲ್ಯಗಳ ಬಗ್ಗೆ ತಿಳಿಸಿದರು. ಸಚಿವ ಸಂಪುಟದ ಎಲ್ಲಾ ಸದಸ್ಯರಿಗೂ ತಮ್ಮ ಕರ್ತವ್ಯ ನಿರ್ವಹಣೆಯ ಬಗ್ಗೆ ತಿಳಿ ಹೇಳಿದರು. 

ಈ ಸಂದರ್ಭದಲ್ಲಿ ಸ್ಕೂಲಿನ ಕ್ರೀಡಾ ವಿಭಾಗದ ಮುಖ್ಯಸ್ಥ ಮಹಾದೇವ ಶಿರಗಾಂವಕರ ಸೇರಿದಂತೆ ಎಲ್ಲ ಶಿಕ್ಷಕ -ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೊನೆಗೆ ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.

ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಮೌಲ್ಯಗಳನ್ನು, ಶಿಸ್ತನ್ನು, ತಮ್ಮದೇ ಆದ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಹೋಗಲು ಸಹಕರಿಸಿತು. ಶಮಿಮ್ ಜಮಾದಾರ ಸ್ವಾಗತಿಸಿದರು. ಕುಮಾರಿ. ಇಕ್ರ ಮತ್ತು ಕುಮಾರ್ ಅನಸ ನಿರೂಪಿಸಿದರು.  

Related Articles

Back to top button