Kannada NewsLatest

ಹೊಸ ಸಹಕಾರ ನೀತಿ ಜಾರಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: “ಸಹಕಾರದಿಂದ ಸಮೃದ್ಧಿಯ ಕಡೆಗೆ” ದೃಷ್ಟಿಯನ್ನು ಅರಿತುಕೊಂಡು, ಸಹಕಾರ ಚಳುವಳಿಯನ್ನು ಬಲಪಡಿಸುವುದು ಮತ್ತು ತಳಮಟ್ಟದವರೆಗೆ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದೊಂದಿಗೆ ಪ್ರತ್ಯೇಕ “ಸಹಕಾರ ಸಚಿವಾಲಯ” ವನ್ನು ರಚಿಸಲಾಗಿದೆ, ಸಚಿವಾಲಯದಲ್ಲಿ ಸಾಕಷ್ಟು ಸಂಖ್ಯೆಯ ಹುದ್ದೆಗಳನ್ನು ಸೃಷ್ಟಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ, ದೇಶವನ್ನು ಅಭಿವೃದ್ಧಿಪಡಿಸಲು ಅದರ ಸದಸ್ಯರಲ್ಲಿ ಜವಾಬ್ದಾರಿಯ ಮನೋಭಾವ, ಸೂಕ್ತವಾದ ನೀತಿ, ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟನ್ನು ರಚಿಸುವುದು ಇತ್ಯಾದಿಗಳನ್ನು ಒಳಗೊಂಡಂತೆ ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿಯನ್ನು ಉತ್ತೇಜಿಸುವುದು. ಇದಲ್ಲದೆ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳು, ರಾಜ್ಯ ಸರ್ಕಾರಗಳು, ಸಹಕಾರಿ ಒಕ್ಕೂಟಗಳು, ಇತ್ಯಾದಿ ಸೇರಿದಂತೆ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಹೊಸ ಯೋಜನೆಗಳು ಮತ್ತು ಹೊಸ ಸಹಕಾರ ನೀತಿಯನ್ನು ರೂಪಿಸಲು ಸರ್ಕಾರ ವಿವಿಧ ಕ್ರಮಗಳನ್ನು ಪ್ರಾರಂಭಿಸಿದೆ ಎಂದರು.

ಹೊಸ ಸಹಕಾರಿಗಳ ಪ್ರಚಾರ ಮತ್ತು ದೇಶದ ತಳಮಟ್ಟದವರೆಗೂ ತಲುಪುವ ಮೂಲಕ ಹೊಸ ನೀತಿಯು ಸಹಕಾರಿಗಳನ್ನು ನಿಜವಾದ ಜನ-ಆಧಾರಿತ ಚಳುವಳಿಯಾಗಿ ಆಳವಾಗಿಸುತ್ತದೆ. ಬಹು-ರಾಜ್ಯ ಸಹಕಾರಿ ಸಂಘಗಳ ಕರ‍್ಯಾಚರಣೆಯ ಪ್ರದೇಶವು ಅವರ ವಿನಂತಿಯ ರ‍್ಜಿಯ ಆಧಾರದ ಮೇಲೆ ಮತ್ತು ಬಹು-ರಾಜ್ಯ ಸಹಕಾರ ಸಂಘಗಳ ಕಾಯಿದೆ, 2002 ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಪ್ರಕಾರ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಎಂಬಿಎ ಮಾಡದಿರುವುದೇ ಒಳ್ಳೇದಾಯ್ತು ಎಂದ ಪ್ಯಾರಾಶೂಟ್ ತೈಲ ಕಂಪನಿಯ ಸಂಸ್ಥಾಪಕ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button