Karnataka NewsLatest
ಆಕಾಶವಾಣಿ ಸಂಸ್ಕೃತ ವಾರ್ತಾ ಪ್ರವಾಚಕರಾಗಿ ಗಣೇಶ ಹೆಗಡೆ

ಪ್ರಗತಿವಾಹಿನಿ ಸುದ್ದಿ, ಶಿರಸಿ: ತಾಲೂಕಿನ ಹಾರೇಹುಲೇಕಲ್ ಅಮಚಿಮನೆಯ ಗಣೇಶ ಹೆಗಡೆ ಆಕಾಶವಾಣಿಯ ಸಂಸ್ಕೃತ ವಾರ್ತಾ ಪ್ರವಾಚಕರಾಗಿ ಆಯ್ಕೆಯಾಗಿದ್ದಾರೆ.
ಶೃಂಗೇರಿಯ ರಾಜೀವ ಗಾಂಧಿ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮುಗಿಸಿ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಮಚಿಮನೆಯ ಲಲಿತಾ ಹೆಗಡೆ ಮತ್ತು ರಮೇಶ ಹೆಗಡೆ ದಂಪತಿ ಪುತ್ರರಾಗಿದ್ದಾರೆ. ಪ್ರಸ್ತುತ ನವದೆಹಲಿಯಲ್ಲಿ ವಾಸವಾಗಿದ್ದಾರೆ.
ರಾಜ್ಯಸಭೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಸೇರಿ ನಾಲ್ವರ ನಾಮನಿರ್ದೇಶನ




