Kannada NewsKarnataka NewsLatest

*ಪತ್ನಿಯನ್ನೇ ಹತ್ಯೆಗೈದ ಆರೋಗ್ಯಾಧಿಕಾರಿ*

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಪ್ರೀತಿಸಿ ವಿವಾಹವಾಗಿದ್ದ ಆರೋಗ್ಯಾಧಿಕಾರಿಯೊಬ್ಬ ತನ್ನ ಪತ್ನಿಯನ್ನೇ ಕೊಲೆಗೈದಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ನಡೆದಿದೆ.

ಇಟಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ಡಿಂಪಲ್ ಕೊಲೆಯಾದ ಮಹಿಳೆ. ಶ್ರೀಕಾಂತ್ ಪತ್ನಿಯನ್ನೇ ಕೊಂದ ಆರೊಗ್ಯಾಧಿಕಾರಿ.

Home add -Advt

ಶ್ರೀಕಾಂತ್ ಹಾಗೂ ಡಿಂಪಲ್ ಇಬ್ಬರೂ ಆರೋಗ್ಯಾಧಿಕಾರಿಗಳಾಗಿದ್ದರು. ಡಿಂಪಲ್ ಉಲವತ್ತು ಗ್ರಾಮದ ಆರೋಗ್ಯಾಧಿಕಾರಿಯಾಗಿದ್ದರೆ ಶ್ರೀಕಾಂತ್ ನೆಲ್ಲಕುದರಿ ಗ್ರಾಮದ ಆರೋಗ್ಯಾಧಿಕಾರಿಯಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು.

ಕೆಲ ದಿನಗಳಿಂದ ಪತಿ-ಪತ್ನಿ ನಡುವೆ ಜಗಳ, ಗಲಾಟೆಯಾಗುತ್ತಿತ್ತು ಎನ್ನಲಾಗಿದೆ. ಅದೇ ರೀತಿ ಇಂದು ಕೂಡ ಗಂಡ-ಹೆಂಡತಿ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಕೋಪದಲ್ಲಿ ಪತಿ ಶ್ರೀಕಾಂತ್ ಪತ್ನಿ ಡಿಂಪಲ್ ಳ ಕತ್ತು ಹಿಸುಕಿ ಉಸಿರು ನಿಲ್ಲಿಸಿದ್ದಾನೆ.

ಇಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.


Related Articles

Back to top button