Kannada NewsKarnataka NewsLatestPolitics

*ಬಿ.ಎಸ್.ವೈ ಸಾರ್ಥಕ 50 ವರ್ಷ ಅಭಿಮಾನೋತ್ಸವ ಪೂರ್ವಭಾವಿ ಸಭೆ*

ಪ್ರಗತಿವಾಹಿನಿ ಸುದ್ದಿ: ಜನರ ಮಡಿಲಲ್ಲಿ ಬಿ.ಎಸ್.ವೈ ಸಾರ್ಥಕ 50 ವರ್ಷ ಅಭಿಮಾನೋತ್ಸವ ಸಮಾರಂಭವು ದಿನಾಂಕ: 09 ಮೇ 2026ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹಿರಿಯ ನಾಯಕರಾದ ಗೋವಿಂದ ಕಾರಜೋಳ, ಮಹಾಲಕ್ಷ್ಮೀ ಲೇಔಟ್‌ ಶಾಸಕರಾದ ಕೆ.ಗೋಪಾಲಯ್ಯ ರವರು ಭಾಗವಹಿಸಿದ್ದರು.

Home add -Advt

ಶಾಸಕ ಗೋಪಾಲಯ್ಯರವರು ಮಾತನಾಡುತ್ತಾ ನಮ್ಮ ನಾಯಕರಾದ ಯಡಿಯೂರಪ್ಪನವರ ಹೆಸರು ರಾಜ್ಯ ರಾಜಕಾರಣ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಮೂಡಿದೆ. 50 ವರ್ಷಗಳ ಅವರ ಹೋರಾಟ, ಜನಸೇವೆ ಹಾಗೂ ಜನಾಡಳಿತ ಜನಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಈ ಅಭಿಮಾನೋತ್ಸವ ಸಮಾರಂಭವು ಬಹಳ ಅರ್ಥಪೂರ್ಣವಾಗಿದೆ. ನಾವೆಲ್ಲರೂ ಸೇರಿ ಈ ಸಮಾರಂಭವನ್ನು ಯಶಸ್ವಿಗೊಳಿಸೋಣ ಎಂದರು. ಪ್ರೀತಂಗೌಡ, ಎಂ.ಡಿ.ಲಕ್ಷ್ಮೀನಾರಾಯಣ ಹಾಗೂ ತುಮಕೂರಿನ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

Related Articles

Back to top button