Kannada NewsKarnataka NewsLatestPolitics

*ತೇಜಸ್ವಿನಿ ಬಿಜೆಪಿಗೆ ರಾಜೀನಾಮೆ ನೀಡಿ ಉಪಕಾರ ತೀರಿಸಿದ್ದಾರೆ; ಮಾಜಿ ಸಿಎಂ ಬಿಎಸ್ ವೈ*

ಪ್ರಗತಿವಾಹಿನಿ ಸುದ್ದಿ: ತೇಜಸ್ವಿನಿ ಗೌಡ ಅವರು ಎಂಎಲ್ ಸಿ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿ ಉಪಕಾರ ತೀರಿಸಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ತೇಜಸ್ವಿನಿ ಗೌಡ ಅವರು ರಾಜೀನಾಮೆ ನೀಡಿರುವುದು ಬಹಳ ಸಂತೋಷ, ಒಳ್ಳೆಯದಾಗಲಿ ಎಂದರು.

ತೇಜಸ್ವಿನಿ ಗೌಡ ಅವರಿಗೆ ಪಕ್ಷ ಎಲ್ಲಾ ಸ್ಥಾನಮಾನಗಳನ್ನು ಕೊಟ್ಟಿದೆ. ಅದಕ್ಕೆ ಅವರು ಈ ರೀತಿ ಉಪಕಾರ ತೀರಿಸಿದ್ದಾರೆ. ಒಳ್ಳೆಯದಾಗಲಿ ಎಂದರು.

ದೇವೇಗೌಡ್ರ ಪ್ರವಾಸ 28 ಸ್ಥಾನ ಗೆಲ್ಲಲು ಅನುಕೂಲ:

ಮಾಜಿ ಪ್ರಧಾನಿ ದೇವೇಗೌಡರು ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದು, ನಾನೂ ಜತೆ ಬರುತ್ತೇನೆಂದು ಹೇಳಿದ್ದೇನೆ. ಜತೆಗೂಡಿ ಪ್ರವಾಸ ಕೈಗೊಳ್ಳುತ್ತೇವೆ ಎಂದು ಬಿಎಸ್ ವೈ ತಿಳಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಪ್ರಭಾವ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿ ಚುನಾವಣೆಯಲ್ಲಿ ಅನುಕೂಲವಾಗಲಿದೆ. ಎರಡೂ ಪಕ್ಷಗಳ ಹೊಂದಾಣಿಕೆಯಿಂದ ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಬಿಎಸ್ ವೈ ಹೇಳಿದರು.

Related Articles

Back to top button