Karnataka News

*ಶೇ.100ರಷ್ಟು ಗುರಿ ತಲುಪಿದ ಬೆಳಗಾವಿ ಗ್ರಾಮಾಂತರ ಬಿಜೆಪಿ ಬೂತ್ ಕಮಿಟಿ: ಬಿ.ವೈ.ವಿಜಯೇಂದ್ರ ಮೆಚ್ಚುಗೆ*

ಪ್ರಗತಿವಾಹಿನಿ ಸುದ್ದಿ: ಕಾರ್ಯಕರ್ತರ ಸಂಕಲ್ಪ ಪೂರಿತ ಬದ್ಧತೆ ಭಾರತೀಯ ಜನತಾ ಪಾರ್ತಿಯ ಸಂಘಟನಾ ಶಕ್ತಿಯಾಗಿದೆ ಇದಕ್ಕೆ ಸಾಕ್ಷಿ ಎಂಬಂತೆ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬೂತ್ ಕಮಿಟಿ ಶೇ.100ರಷ್ಟು ಗುರಿ ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬೂತ್ ಕಮಿಟಿ ಶೇ.100ರಷ್ಟು ಗುರಿ ತಲುಪುವ ಮೂಲಕ ಸಂಘಟನಾ ಪರ್ವ ಅಭಿಯಾನದ ಅತ್ಯುನ್ನತ ಗುರಿ ಸಾಧಿಸಲಾಗಿದೆ. ಇದಕ್ಕಾಗಿ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ್ ಸೇರಿದಂತೆ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಅಭಿನಂದನೆಗಳು. ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಕಾರ್ಯಕರ್ತರ ಕ್ರಿಯಾಶೀಲತೆ ರಾಜ್ಯದ ಇತರ ಕಾರ್ಯಕರ್ತರಿಗೆ ಇನ್ನಷ್ಟು ಸ್ಫೂರ್ತಿ ತುಂಬುವಂತಾಗಲಿ ಎಂದು ಹಾರೈಸಿದ್ದಾರೆ.

Home add -Advt

https://www.facebook.com/share/p/1BAezJJ6Z5


Related Articles

Back to top button