Latest

ಕನ್ ಕ್ಲೂಷನ್ ಗೆ ಬರುವ ಬದಲು ಸಿದ್ದರಾಮಯ್ಯ ಕನ್ ಪ್ಯೂಷನ್ ಮಾಡುತ್ತಿದ್ದಾರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಪಕ್ಷ ಕೆಲವರು ಕುಣಿಸಿದಂತೆ ಕುಣಿಯಬಹುದು. ಆದರೆ ನಮ್ಮ ಪಕ್ಷ ಯಾವುದೇ ವೋಟ್ ಬ್ಯಾಂಕ್ ಗಾಗಿ ಕುಣಿಯುವುದಿಲ್ಲ. ಯಾವುದೇ ಸಂಘಟನೆಗಲು ತಪ್ಪುಮಾಡಿದರೂ ಅದನ್ನು ಸಹಿಸಿಕೊಳ್ಳುವ ಪ್ರಶ್ನೆಯಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಕ್ರಿಮಿನಲ್ ಲಾಯರ್. ಅವರು ಇಂತಹ ಬ್ಯಾಡ್ ಕೇಸ್ ಗಳ ಪರವಾಗಿ ವಕಾಲತ್ತು ವಹಿಸಬಾರದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು ಗಲಭೆಯಲ್ಲಿ ಎಸ್‍ಡಿಪಿಐ ಸಂಘಟನೆ ಕೈವಾಡ ಹಾಗೂ ಈ ಸಂಘಟನೆ ನಿಷೇಧಿಸಬೇಕು ಎಂಬ ಆಗ್ರಹ ಕೇಳಿಬಂದಿರುವ ಹಿನ್ನಲೆಯಲ್ಲಿ ಮಾತನಾಡಿದ ಅವರು, ಸಂಘತನೆ ನಿಷೇಧದ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು. ಯಾವುದೇ ಘಟನೆ ಆಧರಿಸಿ ನಿಷೇಧ ಸರಿಯಲ್ಲ. ಆದರೆ ಹಲವಾರು ಸಮಾಜಘಾತುಕ ಘಟನೆಗಳ ಬಗ್ಗೆ ಸಾಕ್ಷ್ಯಾಧಾರ ಕಲೆಹಾಕಿ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Home add -Advt

ಕೆಲವರು ರಾಜಕೀಯ ಕಾರಣಗಳಿಗಾಗಿ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಅವರಿಗೆ ಅಕ್ಕಿ ಮೇಲೆ ಆಸೆ, ಅಕ್ಕನ ಮಕ್ಕಳ ಮೇಲೂ ಪ್ರೀತಿ ಅನ್ನೋ ರೀತಿ ಕಾಣುತ್ತಿದೆ. ಯಾವುದೇ ವಿಷಯದ ಬಗ್ಗೆ ಕನ್ ಕ್ಲೂಷನ್ ಗೆ ಬರುವ ಬದಲು ಸಿದ್ದರಾಮಯ್ಯ ಕನ್ ಪ್ಯೂಷನ್ ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕೀಯ ಮಾಡುವುದನ್ನು ಕಾಂಗ್ರೆಸ್ ನಾಯಕರು ಇನ್ನಾದರೂ ಬಿಡಬೇಕು. ಯಾವುದೇ ಸಂಘಟನೆ ತಪ್ಪು ಮಾಡಿದರೂ ನಾವು ಅವರನ್ನು ಬಿಡುವುದಿಲ್ಲ. ನಮ್ಮದೇನಿದ್ದರೂ ಏಕ್ ಮಾರ್ ದೋ ತುಕ್ಡಾ ಕ್ರಮ ಎಂದು ಹೇಳಿದರು.

Related Articles

Back to top button