Latest

*ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಯತ್ನ; ಮೂವರ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮಾತಾಂತರಿಸಲು ಯತ್ನಿಸುತ್ತಿದ್ದ ಆಂಧ್ರಪ್ರದೇಶ ಮೂಲದ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಬೆಂಗಳೂರಿನ ವಿ.ಎಸ್ ಗಾರ್ಡನ್ ನಲ್ಲಿ ಅಂಧ್ರ ಮೂಲದ ಕೆಲವರು ಹಿಂದೂಗಳನ್ನು ಮತಾಂತರಿಸಲು ಯತ್ನಿಸುತ್ತಿದ್ದರು. ಏಸುಕ್ರಿಸ್ತನ ಕುರಿತ ಕರಪತ್ರ ಹಂಚಿ, ಹಣದ ಆಮಿಷವೊಡ್ಡಿ, ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು.

ವಿಷಯ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆ ಮುಖಂಡರು ಜೆ.ಜೆ.ನಗರ ಠಾಣೆಯಲ್ಲಿ ದೂರು ನೀಡಿದ್ದರು. ಮತಾಂತರಕ್ಕೆ ಯತ್ನ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮೂಲದ ವಿಜಯ್, ಶೃತಿ, ನೆಲ್ಸನ್ ಎಂಬುವವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

*ಅಥಣಿಯಿಂದ ಯಾರಿಗೆ ಬಿಜೆಪಿ ಟಿಕೆಟ್; ಮಹೇಶ್ ಕುಮಟಳ್ಳಿ ಹೇಳಿದ್ದೇನು?*

Home add -Advt

https://pragati.taskdun.com/belagaviathanimahesh-kumatallibjp-ticket/

Related Articles

Back to top button