Belagavi NewsBelgaum NewsKannada NewsKarnataka NewsLatestPolitics

*ಗ್ರಾಮದೇವಿ ಜಾತ್ರೆಯಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: 18 ವರ್ಷದ ಬಳಿಕ ನಡೆಯುತ್ತಿರುವ ಬೆಳಗಾವಿ ತಾಲೂಕಿನ ಬಸರಿಕಟ್ಟಿಯ ಗ್ರಾಮದೇವತೆ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪಾಲ್ಗೊಂಡು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.

​ ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿಕೊಟ್ಟಿರುವ ಸಚಿವರು, ಜಾತ್ರೆ ಸುಗಮವಾಗಿ ನೆರವೇರುವಂತಾಗಲು ತಮ್ಮ ಸಹಾಯಕರ ಮೂಲಕ ಸಕಲ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮ​ ಸಂಪೂರ್ಣ ಭಂಡಾರಮಯವಾಗಿದೆ. ಭಕ್ತ​ರು ತಂಡೋಪತಂಡವಾಗಿ ಆಗಮಿಸಿ, ದೇವಿಯ ದರ್ಶನ ಪಡೆದು​, ಹರಕೆಯನ್ನು ತೀರಿಸುತ್ತಿದ್ದಾರೆ. 

ಈ ಸಮಯದಲ್ಲಿ  ವಿಧಾನ ಪರಿಷತ್ ಸದಸ್ಯ ​ಚ​ನ್ನರಾಜ ಹಟ್ಟಿಹೊಳಿ, ​ಯುವ ಕಾಂಗ್ರೆಸ್ ಮುಖಂಡ ​ಮೃಣಾಲ ಹೆಬ್ಬಾಳಕರ್,​ ಗ್ರಾಮದ ಮುಖಂಡರು,​ ಜಾತ್ರಾ ಕಮೀಟಿಯ ಪದಾಧಿಕಾರಿಗಳು​ ಉಪಸ್ಥಿತರಿದ್ದರು.

​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button