Kannada NewsLatest

ಬೆಳಗಾವಿಯಲ್ಲಿ ಮತಾಂತರ ಆರೋಪ; ಕುಟುಂಬದವರ ಮೇಲೆ ಹಲ್ಲೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕುಟುಂಬದ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಡಿಸೆಂಬರ್ 29ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಾರ್ಥನೆ ನಡೆಸುತ್ತಿದ್ದ ವೇಳೆ ಮನೆಗೆ ನುಗ್ಗಿ ಹಲವರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Home add -Advt

ಶಿವಾನಂದ ಗೋಟುರು, ರಮೇಶ್ ದಂಡಾಪುರ, ಪರಸಪ್ಪ ಬಾಬು, ಫಕೀರಪ್ಪ ಬಾಗೇವಾಡಿ, ಕೃಷ್ಣ ಕಾನಿಟ್ಕರ್, ಚೇತನ್ ಗಡಾದಿ, ಮಹಾಂತೇಶ್ ಹತ್ತರಗಿ ವಿರುದ್ಧ ಘಟಪ್ರಭಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಗುವಿನ ಮೇಲೆ ಹರಿದ ಹಿಟಾಚಿ; ಸ್ಥಳದಲ್ಲೇ ಕಂದಮ್ಮ ದುರ್ಮರಣ

Related Articles

Back to top button