Latest

*ಗೋಕಾಕ್: ಗೋಲ್ಡ್ ಉದ್ಯಮಿ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಗೋಲ್ಡ್ ವ್ಯಾಪಾರಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆಸ್ಪತ್ರೆಗೆ ಕರೆಸಿಕೊಂಡ ಸ್ನೇಹಿತ ವೈದ್ಯನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಗೋಕಾಕ್ ಪಟ್ಟಣದ ಸಿಟಿ ಹೆಲ್ತ್ ಕೇರ್ ಆಸ್ಪತ್ರೆ ನಡೆಸುತ್ತಿದ್ದ ವೈದ್ಯ ಸಚಿನ್ ಹಾಗೂ ಗೋಲ್ಡ್ ಉದ್ಯಮಿ ರಾಜು ಇಬ್ಬರೂ ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಜಗಳವಾಗಿ ಈಗ ವೈದ್ಯ ಸಚಿನ್ ತನ್ನ ಸ್ನೇಹಿತ ರಾಜುವನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶುಕ್ರವಾರ ಸಂಜೆ 6 ಗಂಟೆಗೆ ಆಸ್ಪತ್ರೆಗೆ ರಾಜುನನ್ನು ಕರೆಸಿಕೊಂಡ ಸಚಿನ್ ಮೊದಲೇ ಅಪಹರಣ ಪ್ಲಾನ್ ಮಾಡಿದ್ದ ಎನ್ನಲಾಗಿದೆ. ಆಸ್ಪತ್ರೆಯಿಂದ ಉದ್ಯಮಿ ರಾಜು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಅನುಮಾನಗೊಂಡ ಪೊಲೀಸರು ವೈದ್ಯ ಸಚಿನ್ ನನ್ನು ಕರೆದು ವಿಚಾರಣೆ ನಡೆಸಿದಾಗ ಎಲ್ಲ ವಿಚಾರ ಬಯಲಿಗೆ ಬಂದಿದೆ. ರಾಜುನನ್ನು ಹತ್ಯೆಗೈದು ಬಳಿಕ ಶವವನ್ನು ನಾಲೆಗೆ ಬಿಸಾಕಲಾಗಿದೆ ಎಂದು ಹೇಳಲಾಗಿದೆ.

ಜಮೀನು ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗೋಕಾಕ್ ಶಹರ ಪೊಲೀಸರು ನಾಲೆಯ ನೀರನ್ನು ಬಂದ್ ಮಾಡಿ ಶೋಧ ನಡೆಸಿದ್ದಾರೆ.

Home add -Advt

*ಶಿವಮೊಗ್ಗ ಏರ್ ಪೋರ್ಟ್ ಗೆ ಯಡಿಯೂರಪ್ಪ ಸೂಚಿಸಿದ್ದು ಯಾರ ಹೆಸರು ಗೊತ್ತೇ?*

https://pragati.taskdun.com/shivamogga-airportkuvempu-nameb-s-yedyurappaclarification/

Related Articles

Back to top button