Kannada NewsLatest

ದಿವ್ಯಾಂಗರ ಮನೆ ಕನಸು ನನಸು ಮಾಡಿದ ಶಾಸಕ ಶ್ರೀಮಂತ ಪಾಟೀಲ್

ಪ್ರಗತಿವಾಹಿನಿ ಸುದ್ದಿ; ಅಥಣಿ : ಎರಡು ವರ್ಷಗಳ ಹಿಂದೆ ಪ್ರವಾಹದಲ್ಲಿ ಮನೆ ಕಳೆದುಕೊಂದಿದ್ದ ಬಡ ರೈತ ಕಲ್ಲಪ್ಪ ಅವರಿಗೆ ಸರಕಾರ ಹೊಸ ಮನೆ ಮಂಜೂರು ಮಾಡಿ ಎರಡು ಕಂತು ಕೂಡ ನೀಡಿದೆ. ಆದರೆ, ಮೂರನೇ ಕಂತಿಗೆ ಸಹಾಯಕಾಗಿ ಎರಡು ವರ್ಷ ಕಳೆದರೂ ಅಧಿಕಾರಿಗಳು ನಿರ್ಲಕ್ಷ ಮಾಡಿದರು. ಕೊನೆಗೆ ಈ ಬಡ ರೈತ ಶಾಸಕರಾದ ಶ್ರೀಮಂತ ಪಾಟೀಲರನ್ನು ಭೇಟಿಯಾಗಿ ಸಮಸ್ಯೆ ತೋಡಿಕೊಂಡಿದ್ದಾರೆ. ತಕ್ಷಣ ಸ್ಪಂದಿಸಿದ ಶಾಸಕರು ಶಾಸಕರು ನೇರವಾಗಿ ಕೃಷ್ಣಾ ಕಿತ್ತೂರಿಗೆ ತೆರಳಿ ಅಧಿಕಾರಿಗಳನ್ನು ಕರೆಸಿ ಹಣ ಮಂಜೂರು ಮಾಡಿಸಿದ್ದಾರೆ.

ಕೃಷ್ಣಾ ಕಿತ್ತೂರಿನ ರೈತ ಕಲ್ಲಪ್ಪ ಸಾವಗಾಂವ ಅವರ ಮನೆಗೆ 2019-20ರಲ್ಲಿ ನೀರು ನುಗ್ಗಿತ್ತು. ಅದರ ಪುನರ್ನಿರ್ಮಾಣಕ್ಕಾಗಿ ಅಧಿಕಾರಿಗಳು ಸಮೀಕ್ಷೆ ನಡೆಸಿ ಹೊಸ ಮನೆಯನ್ನು ಅನುಮೋದಿಸಿದರು. ಇದಕ್ಕಾಗಿ ಸಾವಗಾಂವ್‌ ಐವರಿಗೆ ಎರಡು ಕಂತುಗಳನ್ನೂ ನೀಡಿದ್ದರು. ಆದರೆ, ಮೂರನೇ ಕಂತು ಎರಡು ವರ್ಷಗಳಿಂದ ವಿಳಂಬವಾಗಿತ್ತು. ಹಾಗಾಗಿ ಮನೆಗೆಲಸ ಅಪೂರ್ಣವಾಯಿತು. ಅಂಗವಿಕಲರಾದ ಕಲ್ಲಪ್ಪ ಸಾವಗಾಂವ ಅವರು ಆಗಾಗ ಸರಕಾರಿ ಕಚೇರಿಗಳ ಹೊಸ್ತಿಲನ್ನು ಸವೆಸುತ್ತಿದ್ದರು. ಆದರೆ, ಯಾರೂ ಅವರಬಗ್ಗೆ ಅನುಕಂಪ ತೋರಲಿಲ್ಲ.

ಇತ್ತೀಚೆಗಷ್ಟೇ ಅವರು ಮಾಜಿ ಸಚಿವ ಹಾಗೂ ಕಾಗವಾಡ ಶಾಸಕರನ್ನು ಭೇಟಿಯಾಗಿ ತಮ್ಮ ಕಣ್ಣೀರ ಕಥೆಗಳನ್ನು ಹೇಳಿದ್ದಾರೆ. ರೈತನ ಸಂಕಷ್ಟ ಕಂಡು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ಶಾಸಕರು, ನೇರವಾಗಿ ಕೃಷ್ಣಾ ಕಿತ್ತೂರಿನ ಕಲ್ಲಪ್ಪ ಸಾವಗಾಂವ ಅವರ ಮನೆಗೆ ಭೇಟಿ ನೀಡಿದ್ದಾರೆ. ಅರೆಬರೆ ಮನೆಯನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಸ್ಥಳಕ್ಕೆ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ವರ್ಷದಿಂದ ಮೂರನೇ ಕಂತಿನ ಹಣ ಯಾಕೆ ಬಂದಿಲ್ಲ? ಎಂದು ಪ್ರಶ್ನಿಸಿದ ಅವರು, ಈಗಲೇ ಈ ಮನೆಯ ಜಿಪಿಎಸ್ ಮೂಲಕ ಮೊತ್ತ ಮಂಜೂರು ಮಾಡುವಂತೆ ಸೂಚಿಸಿದರು. ಅದರಂತೆ ಸ್ಥಳದಲ್ಲಿಯೇ ಜಿಪಿಎಸ್ ಮೂಲಕ ಮೂರನೇ ಕಂತು ಮಂಜೂರಾಗಿದೆ ಎಂದು ಅಧಿಕಾರಿಗಳು ಶಾಸಕರಿಗೆ ತಿಳಿಸಿದರು. ರೈತನ ಮನೆ ಕನಸು ನನಸಾಗುತ್ತಿರುವ ಖುಷಿಯಲ್ಲಿ ಶಾಸಕ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಲ್ಲಪ್ಪ, ಮನೆಗೆಲಸ ಅಪೂರ್ಣಗೊಂಡಿದ್ದರಿಂದ ಗ್ರಮ ಲೆಕ್ಕಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಆಗಾಗ ಭೇಟಿಯಾಗುತ್ತಿದ್ದೆ. ಆದರೆ, ನಮ್ಮ ಅರ್ಜಿ ಮತ್ತು ಮನವಿಗೆ ಯಾರೂ ಗಮನ ಹರಿಸಲಿಲ್ಲ. ಹೀಗಾಗಿ ಶಾಸಕರನ್ನು ಒಮ್ಮೆ ಭೇಟಿ ಮಾಡಿ, ಈ ವಿಷಯವನ್ನು ಗಮನಕ್ಕೆ ತಂದೆ. ಹೀಗಾಗಿ ಶಾಸಕರು ಮನೆಗೆ ಭೇಟಿ ಕೊಟ್ಟು ಸಮಸ್ಯೆ ನಿವಾರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಶನಿವಾರ ಬೆಳಗಾವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button