Belagavi NewsBelgaum News
*ಬೆಳಗಾವಿ ರಾಜ್ಯೋತ್ಸವ: ಯಾವ ಸ್ತಬ್ಧ ಚಿತ್ರಕ್ಕೆ ಪ್ರಥಮ ಸ್ಥಾನ?*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಶಹಾಪುರ ಕೋರೆ ಬೀದಿಯ ಗಣೇಶ ಯುವಕ ಮಂಡಳದ ಆಕರ್ಷಕ ವಿಜಯನಗರ ಸಾಮ್ರಾಜ್ಯದ ಸ್ತಬ್ಧ ಚಿತ್ರಕ್ಕೆ ಬೆಳಗಾವಿ ಜಿಲ್ಲಾಡಳಿತದಿಂದ ಪ್ರಥಮ ಸ್ಥಾನ ದೊರಕಿದೆ.
ಗಣೇಶ ಯುವಕ ಮಂಡಳವು ಪ್ರತಿವರ್ಷವೂ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳನ್ನು ಮಾಡುತ್ತಾ ಪ್ರಶಸ್ತಿಗಳನ್ನು ಪಡೆಯುತ್ತಿದೆ.
ಸ್ತಬದ್ಧಚಿತ್ರಕ್ಕಾಗಿ ವಿಜಯ ಬಾಗಿ, ಮಹಾಂತೇಶ ಬೆಂಬಳಗಿ, ಅಕ್ಷಯ ಹಿರೇಮಠ, ವಿಶಾಲ ಬಾಗಿ, ಸೋಮನಾಥ್ ಮಟ್ಟಿಕಲ್ಲಿ, ಸಂಕೇತ ರಾಜಮಾನೆ, ಮಹೇಶ ಜವಳಿ, ವೀರೇಶ ಸೋನಾರ್ ಸೇರಿದಂತೆ ಪದಾಧಿಕಾರಿಗಳು ಶ್ರಮ ವಹಿಸಿದ್ದಾರೆ.




