Belagavi NewsBelgaum NewsKannada NewsKarnataka NewsLatest

*ಮಲಪ್ರಭಾ ನದಿಯ ರಭಸಕ್ಕೆ ಕುಸಿಯುವ ಭೀತಿಯಲ್ಲಿ ಸೇತುವೆ; ಆತಂಕದಲ್ಲಿ 30ಕ್ಕೂ ಹೆಚ್ಚು ಗ್ರಾಮದ ಜನರು*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿವೆ. ವರುಣಾರ್ಭಟಕ್ಕೆ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ಅರ್ಭಟಕ್ಕೆ ಸೇತುವೆಯೇ ಕುಸಿಯುವ ಹಂತ ತಲುಪಿದೆ.

ಖಾನಪುರ ತಾಲೂಕಿನ ಪರಿಶ್ವಾಡ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಪಕ್ಕದಲ್ಲಿಯೇ ಮಣ್ಣು ಕುಸಿದಿದೆ. ಒಂದೆಡೆ ಮಲಪ್ರಭಾ ನದಿ ಅಪಾಯದಮಟ್ಟದಲ್ಲಿ ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಆತಂಕ ಎದುರಾಗಿದೆ.

Home add -Advt

ಬೆಳಗಾವಿಯಿಂದ ಹಿರೇಮುನವಳ್ಳಿ, ಅವರೊಳ್ಳಿ ಸೇರಿದಂತೆ 30 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಕುಸಿಯುವ ಹಂತದಲ್ಲಿರುವ ಸೇತುವೆ ಮೇಲೆಯೇ ಜನರು ಜೀವಕೈಯಲ್ಲಿ ಹಿಡಿದು ವಾಹನ ಚಲಾಯಿಸುತ್ತಿದ್ದಾರೆ.


Related Articles

Back to top button