Kannada NewsLatest

ಬೆಳಗಾವಿ; ಉದ್ಯಮಿ ಪತಿ ಹತ್ಯೆಗೆ 2ನೇ ಪತ್ನಿಯಿಂದಲೇ ಸುಪಾರಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣ ಅಚ್ಚರಿಯ ತಿರುವು ಪಡೆದುಕೊಂಡಿದ್ದು, 2ನೇ ಪತ್ನಿಯೇ ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದಳು ಎಂಬ ಅಂಶ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಮಾರ್ಚ್ 15ರಂದು ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬಣ್ಣವರ್ ಹತ್ಯೆಗೀಡಾಗಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಇದೀಗ ರಾಜು ಪತ್ನಿ ಸೇರಿ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಉದ್ಯಮಿ ರಾಜು ಪತ್ನಿ ಕಿರಣಾ, ಧರಣೇಂದ್ರ ಘಂಟಿ, ಶಶಿಕಾಂತ್ ಪಾಟೀಲ್, ಸಂಜಯ ರಜಪೂತ, ವಿಜಯ ಜಾಗೃತ ಎಂದು ಗುರುತಿಸಲಾಗಿದೆ.

Home add -Advt

ರಾಜು ದೊಡ್ಡಬಣ್ಣವರ್ ಮೂರು ಮದುವೆಯಾಗಿದ್ದ. ಎರಡನೇ ಪತ್ನಿ ಹಾಗೂ ರಾಜು ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪವಿತ್ತು ಎನ್ನಲಾಗಿದೆ. ಎರಡನೇ ಪತ್ನಿ ಕಿರಣಾ, ಪತಿಯ ಪಾರ್ಟನರ್ ಗಳಿಗೆ ಪತಿ ಹತ್ಯೆಗೆ 10 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟಿದ್ದಾರೆ.

 

ಗ್ರಾಹಕರ ಗಮನಕ್ಕೆ; ಮುಂದಿನ ವಾರ ಬ್ಯಾಂಕ್ ಸೇವೆಯಲ್ಲಿ ಭಾರಿ ವ್ಯತ್ಯಯ

Related Articles

Back to top button