Kannada NewsKarnataka NewsLatest

*ಕಾಲಿನಿಂದ ಕುತ್ತಿಗೆ ತುಳಿದು ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Home add -Advt

29 ವರ್ಷದ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ನಡೆದಿದೆ. ಪತ್ನಿ ಶಾಪಿಂಗ್ ಗೆ ಹೋಗಿ ಬಂದಿದ್ದಕ್ಕೆ ಕಿರಿಕ್ ತೆಗೆದ ಪತಿ ಮಹಾಶಯ ಪತ್ನಿಗೆ ಹೊಡೆದು ಕೆಳಗೆ ಬೀಳಿಸಿದ್ದಾನೆ. ಕೆಳಗೆ ಬಿದ್ದ ಪತ್ನಿಯನ್ನು ಕಾಲಿನಿಂದ ಒದ್ದು ಆಕೆಯ ಕತ್ತನ್ನು ಕಾಲಿನಿಂದ ತುಳಿದು ಭೀಕರವಾಗಿ ಹತ್ಯೆಗೈದಿದ್ದಾನೆ.

ಕೋಲಾರ ಮೂಲದ ದಂಪತಿ ಬಿಇ ಪದದೀಧರರು. ಇಬ್ಬರೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದಷ್ಟೇ ಪತಿ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ. ಪತ್ನಿ ಜೊತೆ ಕ್ಷುಲ್ಲಕ ಕಾರಣಕ್ಕೆ ಆಗಾಗ ಜಗಳ ಮಾಡುತ್ತಿದ್ದ. ಈಗ ಪತ್ನಿ ಶಾಪಿಂಗ್ ಮಾಡಿಕೊಂಡು ಬಂದಳು ಎಂಬ ಕಾರಣಕ್ಕೆ ಗಲಾಟೆ ಮಾಡಿ, ಆಕೆಯನ್ನು ಕೊಂದೇ ಬಿಟ್ಟಿದ್ದಾನೆ.

Related Articles

Back to top button