Belagavi NewsBelgaum News
*ಇಂಚಲ ಕ್ಷೇತ್ರಕ್ಕೆ ಚನ್ನರಾಜ, ಮೃಣಾಲ ಭೇಟಿ: ಶ್ರೀಗಳಿಗೆ ಗೌರವ*


ಪ್ರಗತಿವಾಹಿನಿ ಸುದ್ದಿ: ಸುಕ್ಷೇತ್ರ ಇಂಚಲ ಮಠದ ಶ್ರೀ ಶಿವಾನಂದ ಭಾರತಿ ಶ್ರೀಗಳ 85 ನೇ ಹುಟ್ಟುಹಬ್ಬ ಹಾಗೂ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಗುರುವಾರ ಮಠಕ್ಕೆ ಭೇಟಿ ನೀಡಿ, ಶ್ರೀಗಳನ್ನು ಗೌರವಿಸಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಹಾಂತೇಶ ಮತ್ತಿಕೊಪ್ಪ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.




