Kannada NewsKarnataka News
ವೈಜನಾಥ ಮಂದಿರದ ನೂತನ ಕಟ್ಟಡಕ್ಕೆ ಭೂಮಿಪೂಜೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಲ್ಲೇಹೋಳ ಗ್ರಾಮದ ಶ್ರೀ ವೈಜನಾಥ ಮಂದಿರದ ನೂತನ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ಚನ್ನರಾಜ ಹಟ್ಟಿಹೊಳಿ ಅವರ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ (MLC Fund) 10 ಲಕ್ಷ ರೂ.ಗಳನ್ನು ಒದಗಿಸಲಾಗಿದ್ದು, ದೇವಸ್ಥಾನದ ಕಟ್ಟಡದ ಕಾಮಗಾರಿಗಳಿಗೆ ಶುಕ್ರವಾರ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಸಂಜಯ ಪಾಟೀಲ, ಮಹೇಶ ಪಾಟೀಲ, ಅನಿಲ ಪಾಟೀಲ, ಮಹೇಶ ಸುತಾರ, ರಮೇಶ ಕಣ್ಣೂರಕರ್, ರುಕ್ಮಣ್ಣ ಮಾರುಚೆ, ಅಶ್ವಿನಿ ಕಣ್ಣೂರಕರ್, ಅಲ್ಕಾ ಲಾಮಜಿ, ಲಕ್ಷ್ಮೀ ವೆಟಲ್, ಎಲ್ ಎನ್ ಪಾಟೀಲ, ಅರುಣ ಪಾಟೀಲ, ಮಹಾದೇವ ಹೊನಗೇಕರ್, ಮೊನಪ್ಪ ಮಾರುಚೆ, ಅನಿಲ ಕಾಂಬಳೆ, ಮಹಾದೇವ ಪಾಟೀಲ, ಅಜಿತ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಬಾಳೇಕುಂದ್ರಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ
https://pragati.taskdun.com/road-asphalting-work-started-in-balekundri-village/




