Latest

ಖ್ಯಾತ ಸಾಹಿತಿ, ವಿಮರ್ಶಕ ಡಾ.ಜಿ.ಎಸ್.ಆಮೂರು ನಿಧನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಖ್ಯಾತ ಸಾಹಿತಿ, ವಿಮರ್ಶಕ ಡಾ.ಜಿ.ಎಸ್.ಆಮೂರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಡಾ.ಶ್ರೀ.ಗುರುರಾಜ ಶ್ಯಾಮಾಚಾರ ಆಮೂರರು(೦೮-೦೫-೧೯೨೫-)  ಹಾನಗಲ್ ತಾಲೂಕಿನ ಬೊಮ್ಮನಳ್ಳಿಯಲ್ಲಿ ಜನಿಸಿದ್ದರು. ಧಾರವಾಡದಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗಷ್ಟೆ ಕನ್ನಡ ಸಾಹಿತ್ಯ ಪರಿಷತ್ ಅವರಿಗೆ ನೃಪತುಂಗ ಪ್ರಶಸ್ತಿ ನೀಡಿ ಗೌರವಿಸಿತ್ತು.  ಅವರ “ಭುವನದ ಭಾಗ್ಯ” ಎಂಬ ಕೃತಿಗೆ  1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

Home add -Advt

ಕಳೆದ ಐದು ದಶಕಗಳಿಂದಲೂ ವಿಮರ್ಶಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಡಾ.ಅಮೂರ ಅವರು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ.

ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿಎ (ಗೌರವ) ಪದವಿ ಪಡೆದರು. ಆ ಬಳಿಕ ಕುಮಟಾ, ಗದಗ ಹಾಗು ಔರಂಗಾಬಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ೧೬ ವರ್ಷ ಸೇವೆ ಸಲ್ಲಿಸಿದರು.

14 ವಿದ್ಯಾರ್ಥಿಗಳಿಗೆ ಪಿಎಚ್ ಡಿ ಮಾರ್ಗದರ್ಶನ ಹಾಗೂ 3 ವಿದ್ಯಾರ್ಥಿಗಳಿಗೆ ಎಂಫಿಲ್ ಮಾರ್ಗದರ್ಶ ನೀಡಿದ್ದರು.

ಆಮೂರರ ಸಾಹಿತ್ಯ ಕೃತಿಗಳು:

  • ಆಧುನಿಕ ಕನ್ನಡ ವಿಮರ್ಶೆ.
  • ಮಹಾಕವಿ ಮಿಲ್ಟನ್
  • ಕೃತಿಪರೀಕ್ಷೆ.
  • ಅ.ನ.ಕೃಷ್ಣರಾಯ
  • ಭುವನದ ಭಾಗ್ಯ
  • ವ್ಯವಸಾಯ
  • ಅರ್ಥಲೋಕ
  • ಕನ್ನಡ ಕಥನ ಸಾಹಿತ್ಯ
  • ಕಾದಂಬರಿ
  • ಸಾತ್ವಿಕ ಪಥ
  • ಕಾದಂಬರಿ ಸ್ವರೂಪ
  • ದ.ರಾ.ಬೇಂದ್ರೆ
  • ಅಮೃತವಾಹಿನಿ
  • ಶಾಂತಿನಾಥ ದೇಸಾಯಿ
  • ಬೇಂದ್ರೆ ಕಾವ್ಯದ ಪ್ರತಿಮಾಲೋಕ
  • ಕಥನ ಶಾಸ್ತ್ರ
  • ಸೀಮೊಲ್ಲಂಘನ
  • ಸಮಕಾಲೀನ ಕಥೆ ಕಾದಂಬರಿ,
  • ಸಣ್ಣಕತೆ.
  • ಕನ್ನಡ ಕಾದಂಬರಿಯ ಬೆಳವಣಿಗೆ,
  • ಆಧುನಿಕ ಕನ್ನಡ ಸಾಹಿತ್ಯದ ವಿರಾಟಪುರುಷ
  • Adya Rangachar
  • A Critical spectrum
  • Images and Impressions
  • A.N.Krishnarao
  • The Concept of Comedy
  • Poetics of T.S.Eliot
  • Essays on modern Kannada literature

ಆಮೂರರಿಗೆ ಬಂದ ಪ್ರಮುಖ ಪ್ರಶಸ್ತಿಗಳು –

  • ಭುವನದ ಭಾಗ್ಯ’ ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ (ಕೊಲ್ಕತ್ತಾ)
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ,ಅ.ನ.ಕೃ.ಪ್ರಶಸ್ತಿ ಮುಂತಾದ ಎಂಟು ಪುರಸ್ಕಾರಗಳು
  • ಪಂಪ ಪ್ರಶಸ್ತಿ
  • ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನವು ನೀಡುವ ಡಾ.ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿ.೨೦೧೬ 
  • ನೃಪತುಂಗ ಪ್ರಶಸ್ತಿ – 2020

Related Articles

Back to top button