World

*ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಹರಿಯಬೇಕು; ಇಲ್ಲವಾದಲ್ಲಿ ಭಾರತೀಯರ ರಕ್ತ ಹರಿಯಲಿದೆ: ನಾಲಿಗೆ ಹರಿಬಿಟ್ಟ ಬಿಲಾವಲ್ ಭುಟ್ಟೋ*

ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 28 ಪ್ರವಾಸಿಗರು ಸಾವನ್ನಪ್ಪಿರುವ ಬೆನ್ನಲ್ಲೇ ಉಗ್ರರ ವಿರುದ್ಧ ಕಾರ್ಯಾಚಾರಣೆ ಚುರುಕುಗೊಳಿಸಿರುವ ಭಾರತ, ಪಾಕಿಸ್ತಾನದ ಜೊತೆಗೆ ಕಠಿಣ ಕ್ರಮ ಗಳನ್ನು ಕೈಗೊಂಡಿದೆ. ಸಿಂಧೂನದಿ ನೀರು ಹಂಚಿಕೆ ಸ್ಥಗಿತಗೊಳಿಸಿದೆ. ಭಾರತದಲ್ಲಿರುವ ಪಾಕ್ ಪ್ರಜೆಗಳು ವಾಪಸ್ ತೆರಳಿವಂತೆ ಸೂಚಿಸಿದೆ. ಪಾಕ್ ಪ್ರಜೆಗಳಿಗೆ ಎಲ್ಲಾ ಮಾದರಿಯ ವೀಸಾ ರದ್ದು ಮಾಡಿದೆ.

ಸಿಂಧೂ ನದಿ ನೀರು ನಿಲ್ಲಿಸುತ್ತಿದ್ದಂತೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ,ಸಿಂಧೂ ನದಿ ನಮ್ಮದು. ನದಿ ನೀರು ಪಾಕಿಸ್ತಾನಕ್ಕೆ ಹರಿಯಬೇಕು. ಇಲ್ಲವಾದಲ್ಲಿ ಭಾರತೀಯರ ರಕ್ತ ಹರಿಯುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ.

ಸಿಂಧೂ ನದಿ ನಮ್ಮದೇ ಆಗಿರಲಿದೆ. ನಮ್ಮ ನೀರು ಮನಗೆ ಹರಿಯಬೇಕು ಇಲ್ಲವಾದಲ್ಲಿ ಅವರ ರಕ್ತ ಹರಿಯುತ್ತದೆ ಎಂದು ಹೇಳಿದ್ದಾರೆ.

Home add -Advt

ಪಹಲ್ಗಾಮ್ ದಾಳಿಗೆ ಪಾಕಿಸ್ತಾನವನ್ನು ಬಲಿಪಶುಮಾಡಲಾಗುತ್ತಿದೆ. ಆಮೂಲಕ ಭಾಅರತ ತನ್ನ ಆಂತರಿಕ ಭದ್ರತಾ ಲೋಪಗಳ ಗಮನವನ್ನು ಬೇರೆಡೆ ಸೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ.

Related Articles

Back to top button