Belagavi NewsBelgaum NewsKannada NewsKarnataka NewsSports

*ಎತ್ತಿನಗಾಡಿ, ಕುದುರೆ ಗಾಡಿ ಶರ್ಯತ್ತು: ಜೊಲ್ಲೆ ಗ್ರುಪ್ ನಿಂದ 38 ಲಕ್ಷ ರೂ. ಬಹುಮಾನ* 

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : *ಜೊಲ್ಲೆ ಗ್ರೂಪ್ ವತಿಯಿಂದ  ಆಯೋಜಿಸಿದ  ಬೀರೇಶ್ವರ  ಜಾತ್ರೆಯ ನಿಮಿತ್ಯ ಭವ್ಯ ಎತ್ತಿನಗಾಡಿ ಹಾಗೂ ಕುದುರೆ ಗಾಡಿ ಶರ್ಯತ್ತು ಸ್ಪರ್ಧೆಗೆ ಒಟ್ಟು 38 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.* 

*ಶರ್ಯತ್ತು ಮೈದಾನದ ಅಂತಿಮ ಹಂತದ ತಯಾರಿಯನ್ನು ವೀಕ್ಷಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ ಈ ಮಾಹಿತಿ ನೀಡಿದ್ದಾರೆ.*

ರವಿವಾರ, ದಿ.11-02-2024 ರಂದು ಮುಂಜಾನೆ 9 ಗಂಟೆಗೆ ಮಲಿಕವಾಡ ಮೈದಾನ (ತಾ. ಚಿಕ್ಕೋಡಿ)ಶರ್ಯತ್ತು ಜರುಗಲಿದ್ದು  ಬೀರೇಶ್ವರ ಶರ್ಯತ್ತು ಕಮೀಟಿ ವತಿಯಿಂದ  ಈ ಕೆಳಗಿನಂತೆ ಬಹುಮಾನ ನೀಡಲಾಗುವುದು.

*ಜನರಲ್ ಎತ್ತಿನ ಗಾಡಿ ಶರ್ಯತ್ತು* 

ಪ್ರಥಮ ಸ್ಥಾನ ರೂ. 11,00,000/-ದ್ವಿತೀಯ ಸ್ಥಾನ 5,00,000/- ತೃತೀಯ ಸ್ಥಾನ 3,00,000/-ನಾಲ್ಕನೇ ಸ್ಥಾನ ರೂ.2,00,000/-

*ಎತ್ತಿನ ಗಾಡಿ ಶರ್ಯತ್ತು  ಕರ್ನಾಟಕ ಮರ್ಯಾದಿತ*

ಪ್ರಥಮ ಸ್ಥಾನ ರೂ. 5,00,000/- ದ್ವಿತೀಯ ಸ್ಥಾನ ರೂ. 3,00,000/-ತೃತೀಯ ಸ್ಥಾನ ರೂ.2,00,000/- ನಾಲ್ಕನೇ ಸ್ಥಾನ ರೂ. 1,00,000/-

*ಜನರಲ್ ಕುದುರೆ ಗಾಡಿ ಶರ್ಯತ್ತು* – ಪ್ರಥಮ ಸ್ಥಾನ ರೂ. 1,00,000/-ದ್ವಿತೀಯ ಸ್ಥಾನ ರೂ.75,000/-ತೃತೀಯ ಸ್ಥಾನ 50,000/- ಚತುರ್ಥ ಸ್ಥಾನ 25,000/-

*ಕುದುರೆ ಗಾಡಿ ಶರ್ಯತ್ತು ಕರ್ನಾಟಕ ಮರ್ಯಾದಿತ* ಪ್ರಥಮ ಸ್ಥಾನ ರೂ. 1,00,000/-ದ್ವಿತೀಯ ಸ್ಥಾನ ರೂ.75,000/- ತೃತೀಯ ಸ್ಥಾನ ರೂ. 50,000/- ಚತುರ್ಥ ಸ್ಥಾನ ರೂ. 25,000/-

ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಜಯಾನಂದ ಜಾಧವ, ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ಮತಾಬ ಮಂಕಾಂದರ, ಶಂಕರ ಬಾಕಳೆ, ಅಶೋಕ ಲೋಕರೆ, ರಾಜು ಜಾಧವ, ಗುಂಡು ಮಂಗಾವತೆ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button