Belagavi NewsBelgaum NewsKannada NewsKarnataka NewsLatest

*ಪ್ರಶಸ್ತಿ ಪುರಸ್ಕಾರಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ; ಹೃದಯರೋಗ ತಜ್ಞ ಡಾ. ಎಂ. ಡಿ. ದೀಕ್ಷಿತ ಅಭಿಪ್ರಾಯ*

ಪ್ರಗತಿವಾಹಿನಿ ಸುದ್ದಿ: ಪ್ರಶಸ್ತಿ ಪುರಸ್ಕಾರಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಗಡಿಭಾಗವಾದ ಬೆಳಗಾವಿಯಲ್ಲಿ ಕನ್ನಡ ಭಾಷೆ ಉಳಿಸುವ ಬೆಳೆಸುವ ಕಾರ್ಯವಾಗಬೇಕಿದೆ. ಈ ಕುರಿತಂತೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಕನ್ನಡ ಲೇಖಕರಿಗೆ, ಪ್ರಕಾಶಕರಿಗೆ, ಸಮಾಜ ಸೇವಕರಿಗೆ ಪ್ರಶಸ್ತಿಗಳನ್ನು ನೀಡುವುದರ ಮೂಲಕ ಪ್ರೋತ್ಸಾಹಿಸುತ್ತ ಬಂದಿದೆ ಎಂದು ಖ್ಯಾತ ಹೃದಯರೋಗ ತಜ್ಞರಾದ ಡಾ. ಮಹಾದೇವ ಡಿ. ದೀಕ್ಷಿತ ಅವರು ಇಂದಿಲ್ಲಿ ಹೇಳಿದರು.


ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು 2022 ಮತ್ತು 2023 ನೇ ಸಾಲಿನ ಸಿರಿಗನ್ನಡ ಗೌರವ ಪ್ರಶಸ್ತಿ ಹಾಗೂ 2021 ಮತ್ತು 2022 ನೇ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಅಲ್ಲದೇ ವಿವಿಧ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವು ದಿ. 4 ರಂದು ಹಿಂದವಾಡಿಯ ಐ.ಎಂ.ಇ.ಆರ್ ಸಭಾಭವನದಲ್ಲಿ ನಡೆಯಿತು. ಸಿರಿಗನ್ನಡ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಡಾ. ದೀಕ್ಷಿತ ಅವರು ಮೇಲಿನಂತೆ ಹೇಳಿದ ಅವರು ನನಗೆ ಹೃದಯ ಶಸ್ತ್ರಕ್ರಿಯೆ ಮಾಡುವುದರಕ್ಕಿಂತ ಭಾಷಣ ಮಾಡುವುದು ಕಷ್ಟದ ಕೆಲಸ ಎಂದು ಹೇಳಿದರು.


ಅತಿಥಿಗಳಾಗಿ ಆಗಮಿಸಿದ್ದ ಲೇಖಕ, ನಾಟಕಕಾರ ಬಿ. ಆರ್. ಪೊಲೀಸ ಪಾಟೀಲ ಅವರು ಮಾತನಾಡುತ್ತ ಬರೆದಂತೆ ಬದುಕುವ ಧರ್ಮವನ್ನು ನಾವು ಕಲಿಯಬೇಕಾದದ್ದು ಜನಪದರಿಂದ, ಶರಣರಿಂದ, ಶರಣರ ವಚನದಿಂದ. ನಮಗೆ ದೇಸಿ ಕಾವ್ಯದಲ್ಲಿ ಅದ್ಭುತವಾದ ರಚನೆಗಳು ಸಿಗುತ್ತವೆ ಎಂದು ಹೇಳಿದರು.


ಕೃತಿಗಳ ಮೌಲ್ಯಮಾಪನ ಮಾಡಿದ =ಸಂಧ್ಯಾ ಹುನಗುಂಟೇಕರ ಅವರು ಮಾತನಾಡಿ ಲೇಖಕ ಪ್ರಾದೇಶಿಕತೆಯನ್ನು ರೂಢಿಸಿಕೊಳ್ಳದೇ ಹೋದಂತಹ ಬರವಣಿಗೆ ಅದು ತನ್ನತನ ಕಳೆದುಕೊಂಡು ಹೋದಂತಾಗುತ್ತದೆ. ದೇಸಿಯತೆ ಅವಶ್ಯ ಎಂದು ಹೇಳಿದರು.

Home add -Advt


2023 ಸಿರಿಗನ್ನಡ ಗೌರವ ಪಡೆದ ಪ್ರೊ. ವಿ. ಎನ್.ಗೋಡಖಿಂಡಿ, ಪ್ರೊ. ರಾಜಶೇಖರ ಕರಡಿಗುದ್ದಿಯವರನ್ನು ಅಲ್ಲದೇ 2021- 23 ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ಪಡೆದಿರುವ ಡಾ. ಸಿ. ಕೆ. ನಾವಲಗಿ, ಡಾ. ಬಸವರಾಜ ಜಗಜಂಪಿ, ಬಿ. ಎಸ್. ಜಗಾಪುರ, ಡಾ. ಜೆ.ಪಿ. ದೊಡ್ಡಮನಿ, ಬಸವಣ್ಣೆಪ್ಪ ಕಂಬಾರ, ಡಾ. ಬಸು ಬೇವಿನಗಿಡದ, ಶೋಭಾ ನಾಯಿಕ, ರಂಜನಾ ನಾಯಕ, ಅಶೋಕ ಮಳಗಲಿ, ಡಾ. ಆರ್. ಬಿ. ಚಿಲುಮಿ, ಅಪ್ಪಾಸಾಹೇಬ ಸದರ ಜೋಶಿ, ದೀಪಿಕಾ ಚಾಟೆ, ಪ್ರಿಯಾ ಪುರಾಣಿಕ, ಹಮೀದಾ ಬೇಗಮ್ ದೇಸಾಯಿ, ಅನುಪಮಾ ಚೌಗಲೆ, ಪಂ. ರಾಜಪ್ರಭು ಧೋತ್ರೆ, ಸುನಂದಾ ಮುಳೆ, ಬಸವರಾಜ ಗಾಗರ್ಿ, ಎ.ಎ. ಸನದಿ, ಸುನಂದಾ ಹಾಲಬಾವಿ, ಡಾ. ಪಿ.ಜಿ. ಕೆಂಪಣ್ಣವರ, ನೀರಜಾ ಗಣಾಚಾರಿ, ಯ. ರು. ಪಾಟೀಲ, ಶಮಾ ಜಮಾದಾರ, ಸ, ರಾ, ಸುಳಕೂಡೆ, ಸುಮಾ ಕಾಟ್ಕರ್, ಬಿ. ಎಸ್. ಗವಿಮಠ, ಶೀಲಾ ಅಂಕೋಲಾ, ಶೈಲಜಾ ಭಿಂಗೆ, ಬಾಳೇಶ ಚಿನಗುಡಿ, ಕಿತ್ತೂರಿನ ರಾಜಗುರು ಸಂಸ್ಥಾನಮಠ, ಮುಕುಂದ ಗೋರೆ ಅಲ್ಲದೇ ಪ್ರೌಢಶಾಲಾ ವಿದ್ಯಾಥರ್ಿಗಳ ಪ್ರಬಂಧ ಸ್ಪಧರ್ೆ, ಕನ್ನಡ ವಾಚನ ಸ್ಪರ್ಧೆ, ದಾಸರ ಪದಗಳ ಸ್ಪರ್ಧೆಯಲ್ಲಿ ವಿಜೇಯಿತರನ್ನ ಗೌರವಿಸಲಾಯಿತು.


ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಅದ್ಯಕ್ಷರಾದ ಎಸ್. ಎಂ. ಕುಲಕರ್ಣಿ ಅಧ್ಯಕ್ಷತೆಯನ್ನು ವಹಿಸಿದ್ದರು. ದೀಪಾ ಪದಕಿ ಸಂಗಡಿಗರ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನೀರಜಾ ಗಣಾಚಾರಿ ಸ್ವಾಗತಿಸಿದರು. ಶಿರೀಷ ಜೋಶಿ ಪರಿಚಯಿಸಿದರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button