Kannada NewsKarnataka NewsLatest

*ಜಾತಿ ಗಣತಿ: ವೀರಶೈವ ಲಿಂಗಾಯತ ತುರ್ತು ಸಭೆ*

ಪ್ರಗತಿವಾಹಿನಿ ಸುದ್ದಿ: ಜಾತಿ ಗಣತಿ ವರದಿಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ವೀರಶೈವ ಲಿಂಗಾಯತ ಮುಖಂಡರು ತುರ್ತು ಸಭೆ ಕರೆದಿದ್ದಾರೆ.

ಕಾಂತರಾಜ್ ವರದಿಯನ್ನು ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಸ್ತಾಂತರಿಸಿದ್ದಾರೆ. ಈ ವರದಿಯು ಅವೈಜ್ಞಾನಿಕವಾಗಿದ್ದು ವೀರಶೈವ ಲಿಂಗಾಯಿತ ಜನಾಂಗಕ್ಕೆ ಬಹಳಷ್ಟು ನಷ್ಟವುಂಟಾಗಲಿದೆ.


ಈ ವರದಿಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ದಿನಾಂಕ 03/03/2024 ರಂದು ಭಾನುವಾರ ಮಹಾಲಕ್ಷ್ಮಿ ಲೇಔಟ್ ಶರಣ ಸೇವಾ ಸಮಾಜ ದಲ್ಲಿ ಸಭೆಯನ್ನು ಸಂಜೆ 5 ಗಂಟೆಗೆ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ಮಿರ್ಜಿ ಹಾಗೂ ವೀರಶೈವ ಲಿಂಗಾಯತ ಮುಖಂಡರ ಸಮ್ಮುಖದಲ್ಲಿ ಕರೆಯಲಾಗಿದೆ.

ಈ ತುರ್ತು ಸಭೆಯಲ್ಲಿ ಎಲ್ಲಾ ವೀರಶೈವ ಲಿಂಗಾಯತರು ಭಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Related Articles

Back to top button