Latest

ಸದ್ಯದಲ್ಲೇ ಸಪ್ತಪದಿ ತುಳಿಯಲಿದೆ ಕೆಎಲ್ ರಾಹುಲ್- ಆಥಿಯಾ ಜೋಡಿ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ನಟಿ ಆಥಿಯಾ ಶೆಟ್ಟಿ ಖಂಡಾಲಾದ ಸುನೀಲ್ ಶೆಟ್ಟಿ ಅವರ ಬಂಗಲೆ ಜಹಾನ್‌ನಲ್ಲಿ ಸಪ್ತಪದಿ ತುಳಿಯಲಿದ್ದಾರೆ.

ಆದರೆ ಮುಹೂರ್ತ ಇನ್ನೂ ನಿರ್ಧಾರವಾಗಿಲ್ಲ. ಕೆಎಲ್ ರಾಹುಲ್ ಅವರ ಕೆಲಸದ ವೇಳಾಪಟ್ಟಿಯನ್ನು ಪರಿಗಣಿಸಿ  ದಿನಾಂಕವನ್ನು ನಿಗದಿಪಡಿಸಲಾಗುವುದು.  ಈಗಾಗಲೇ ಕುಟುಂಬಗಳ ಹಿರಿಯರು ಖಂಡಾಲಾಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ.

Home add -Advt

ಈ ಬಗ್ಗೆ ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಅಭಿಮಾನಿಗಳು ಬಹು ಕುತೂಹಲ ಹೊಂದಿದ್ದರೆ ಮದುವೆ ಸುದ್ದಿಗೆ  ಪ್ರತಿಕ್ರಿಯಿಸಿದ ಸುನೀಲ್ ಶೆಟ್ಟಿ “ಮಕ್ಕಳು ನಿರ್ಧರಿಸಿದ ತಕ್ಷಣ ಮದುವೆ ನಡೆಯಲಿದೆ” ಎಂದು ಹೇಳಿದ್ದಾರೆ.

ಪೆನ್ನಲ್ಲೇ ಶಿಶುವಿನ ಕರುಳು ಬಳ್ಳಿ ಕತ್ತರಿಸಿದ್ದಳಂತೆ ಶಾಲೆಯಲ್ಲಿ ಮಗು ಹೆತ್ತು ಪೊದೆಯಲ್ಲಿ ಎಸೆದಿದ್ದ ಬಾಲಕಿ

Related Articles

Back to top button