Latest

ತನ್ನ ಕಚೇರಿ ಮೇಲೆಯೇ ರೇಡ್ ಮಾಡಿದ ಸಿಬಿಐ!

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಿಬಿಐ ಡಿವೈಎಸ್ ಪಿ ಸೇರಿದಂತೆ ನಾಲ್ವರು ಲಂಚ ಪಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ದೆಹಲಿಯ ತಮ್ಮ ಕೇಂದ್ರ ಕಚೇರಿ ಮೇಲೆಯೇ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಸಿಬಿಐ ಕಂಪನಿ ಒಂದರ ವಿರುದ್ಧ ತನಿಖೆ ನಡೆಸುತ್ತಿದ್ದು, ಆ ಕಂಪನಿಯಿಂದ ಲಂಚ ಪಡೆದ ಆರೋಪ ಹಿನ್ನೆಲೆಯಲ್ಲಿ ಸಿಬಿಐ ಡಿವೈಎಸ್ ಪಿ ಆರ್.ಕೆ.ರಿಷಿ ಹಾಗೂ ಆರ್.ಕೆ.ಸಾಂಗ್ವಾನ್, ಇನ್ಸ್ ಪೆಕ್ಟರ್ ಕಪಿಲ್ ಧಂಕಡ್ ಮತ್ತು ಸ್ಟೆನೋಗ್ರಾಫರ್ ಸಮೀರ್ ಕುಮಾರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಸಿಜಿಓ ಸಂಕೀರ್ಣದಲ್ಲಿರುವ ತನ್ನ ಸ್ವಂತ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button