ಕೇಂದ್ರ ಬಿಡುಗಡೆ ಮಾಡಿರುವ ನೆರೆ ಪಾರಿಹಾರದ ಗೊಂದಲಕ್ಕೆ ಸಿಎಂ ತೆರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರದಿಂದ ಬಂದ ನೆರೆ ಪ್ರವಾಹ ಪರಿಹಾರದ ಬಗ್ಗೆ ಸಿಎಂ ಬಿಎಸ್‌ ಯಡಿಯೂರಪ್ಪ ಸ್ಪಷ್ಟಣೆ ನೀಡಿದ್ದು, 2ನೇ ಹಂತದಲ್ಲಿ ಕೇಂದ್ರ ಸರಕಾರ ಕೊಟ್ಟ ನೆರೆ ಪರಿಹಾರ 669 ಕೋಟಿ ರೂ. ಎಂದು ತಿಳಿಸುವ ಮೂಲಕಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇತ್ತೀಚೆಗೆ ತುಮಕೂರಿಗೆ ಭೇಟಿ ನೀಡಿ ವಾಪಾಸಾದ ಬಳಿಕ ರಾಜ್ಯಕ್ಕೆ ನೆರೆ ಪರಿಹಾರ ರೂಪದಲ್ಲಿ 1800 ಕೋಟಿ ರೂ. ಬಿಡುಗಡೆ ಮಾಡಿದೆ ಎನ್ನಲಾಗಿತ್ತು. ಈ ವಿಚಾರವಾಗಿ ಕೇಂದ್ರದ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದರು. ಒಟ್ಟಾರೆ ರಾಜ್ಯಕ್ಕೆ ಕೇಂದ್ರದಿಂದ ಬಿಡುಗಡೆಯಾದ ಪರಿಹಾರದ ಮೊತ್ತದ ಬಗ್ಗೆ ಗೊಂದಲಗಳು ಏರ್ಪಟ್ಟಿದ್ದವು.

Home add -Advt

ನೆರೆ ಪರಿಹಾರದ ಗೊಂದಲದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಮೊದಲು 1,200 ಕೋಟಿ ರೂ. ಬಂದಿದೆ. ಈಗ 669 ಕೋಟಿ ರೂ. ಕೊಟ್ಟಿದ್ದಾರೆ. ಒಟ್ಟು ಮೊತ್ತ 1,869 ಕೋಟಿ ರೂ. ಎನ್ನುವುದನ್ನು ಖಚಿತ ಪಡಿಸಿದರು.

Related Articles

Back to top button