Kannada NewsLatest

‘ಆದಿ ಪುರುಷ್’ ಚಿತ್ರಕ್ಕಾಗಿ ಸಂಭಾಷಣೆಕಾರ ಮನೋಜ್ ಶುಕ್ಲಾ ಕ್ಷಮೆ ಯಾಚನೆ

ಪ್ರಗತಿವಾಹಿನಿ ಸುದ್ದಿ, ಮುಂಬಯಿ: “ಆದಿ ಪುರುಷ್’ ಚಿತ್ರದ ಸಂಭಾಷಣೆಕಾರ ಮನೋಜ್ ಮುಂತಶಿರ್ ಶುಕ್ಲಾ ಅವರು ಈ ಸಿನಿಮಾದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ಇದಕ್ಕಾಗಿ ಅವರು ಕ್ಷಮೆ ಕೂಡ ಯಾಚಿಸಿದ್ದಾರೆ.

ಈ ಕುರಿತು “ನಾನು ಕೈಮುಗಿದು ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ… ಪ್ರಭು ಬಜರಂಗ ಬಲಿ ನಮ್ಮನ್ನು ಒಗ್ಗೂಡಿಸಲಿ” ಎಂದು ಅವರು ಶನಿವಾರ ಟ್ವೀಟ್ ಮಾಡಿದ್ದಾರೆ.

ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಈ ಚಲನಚಿತ್ರ ಅದರ ಸಂಭಾಷಣೆಗಳು ಮತ್ತು ಧಾರ್ಮಿಕ ಪಾತ್ರಗಳ ಚಿತ್ರಣಕ್ಕಾಗಿ ಟೀಕೆಗೊಳಗಾಗಿದೆ. ಚಿತ್ರದಲ್ಲಿ ರಾಮ, ರಾವಣ, ಹನುಮಂತ ಸೇರಿದಂತೆ ಎಲ್ಲ ಪಾತ್ರಗಳನ್ನು ಅಸಹಜ ಮತ್ತು ಟೀಕಾಸ್ಪದ ರೀತಿಯಲ್ಲಿ ಬಿಂಬಿಸಿದ್ದು ಚಿತ್ರದ ಡೈಲಾಗ್ ಗಳನ್ನು ‘ಟಪೋರಿ ಡೈಲಾಗ್ಸ್’ ಎಂದು ಜನ ಹೀಗಳೆದಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button