Belagavi NewsBelgaum NewsKannada NewsKarnataka NewsLatest
ದೇವಸ್ಥಾನಕ್ಕೆ ದೇಣಿಗೆ : ಸಮಿತಿಯಿಂದ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ರಾಮದುರ್ಗ ತಾಲೂಕಿನ ಇಡಗಲ್ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ (ಪಡಿಯಪ್ಪ) ದೇವಸ್ಥಾನ ಮಹಾದ್ವಾರ ನಿರ್ಮಾಣದ ಸಲುವಾಗಿ ವೈಯಕ್ತಿಕವಾಗಿ ದೇಣಿಗೆ ನೀಡಿದ್ದಾರೆ.
ದೇಣಿಗೆ ಸ್ವೀಕರಿಸಿರುವ ದೇವಸ್ಥಾನದ ಟ್ರಸ್ಟ್ ಕಮೀಟಿಯವರು ಭಾನುವಾರ ಚನ್ನರಾಜ ಅವರ ಮನೆಗೆ ಆಗಮಿಸಿ, ಕೃತಜ್ಞತೆ ಸಲ್ಲಿಸಿ, ಸನ್ಮಾನಿಸಿದರು.



