*ಡಾ. ಪ್ರಭಾಕರ ಕೋರೆ ಕೋ-ಆಫ್ ಸೊಸಾಯಿಟಿಗೆ ರೂ 25 ಕೋಟಿ ಲಾಭ*

ಪ್ರಗತಿವಾಹಿನಿ ಸುದ್ದಿ, ಅಂಕಲಿ: ಡಾ. ಪ್ರಭಾಕರ ಕೋರೆ ಕೋ-ಆಫ್ ಕ್ರೇಡಿಟ್ ಸೊಸಾಯಿಟಿಗೆ ರೂ ೨೫.೩೦ ಕೋಟಿ ಲಾಭವಾಗಿದೆ.
ಅಧ್ಯಕ್ಷರಾದ ಮಾಹಾಂತೇಶ ಲಿ ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ. ಅಂಕಲಿ ಗ್ರಾಮದ ಡಾ. ಪ್ರಭಾಕರ ಕೋರೆ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ನಿ., ಅಂಕಲಿ (ಬಹು ರಾಜ್ಯ) ರಾಜ್ಯಾದ್ಯಂತ ೫೫ ಶಾಖೆಗಳನ್ನು ಹೊಂದಿದ್ದು. ಸನ್ ೨೦೨೪-೨೫ ಸಾಲಿನಲ್ಲಿ ಸಾಲ ಶೇ ೯೨% ವಸುಲಾತಿ ಮಾಡಿ ರೂ ೨೫.೩೦ ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಅವರು ತಿಳಿಸಿದರು.

ಸಂಸ್ಥೆಯು ೧೯೮೯ ರಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಾಹಾಸ್ವಾಮಿಗಳ ಅಮೃತ ಹಸ್ತದಿಂದ ಪ್ರಾರಂಭವಾಗಿ ಸಂಸ್ಥಾಪಕ ಡಾ. ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ ಮತ್ತು ಅಮೀತ ಕೋರೆ ಹಾಗೂ ಪ್ರೀತಿ ದೊಡವಾಡ ಇವರ ನೆತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಬುಧವಾರದಂದು ಸಂಸ್ಥೆಯ ಆಡಳಿತ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಥೆಯ ಒಟ್ಟು ೫೫ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು. ಸಂಸ್ಥೆಯು ಗ್ರಾಮೀಣ ಭಾಗದ ಶಾಖೆUಳಿಂದ ರೈತಾಪಿ ವರ್ಗದವರಿಗೆ ತನ್ನ ಅಧುನಿಕ ತಂತ್ರಜ್ಞಾನದ ಮೂಲಕ ತ್ವರಿತ ಸೇವೆಗಳನ್ನು ನೀಡುತ್ತಿದ್ದು. ವಾರ್ಷಾಂತ್ಯಕ್ಕೆ ೯೭೭೨೭ ಸದಸ್ಯರನ್ನು ಹೊಂದಿದೆ. ರೂ ೪ ಕೋಟಿಗೂ ಮಿಕ್ಕಿ ಶೇರು ಬಂಡವಾಳ ಹೊಂದಿ ೧೪೧ ಕೋಟಿಗೂ ಮಿಕ್ಕಿ ನಿಧಿಗಳನ್ನು ಸಂಗ್ರಹಿಸಿ ೧೫೧೧ ಕೋಟಿಗೂ ಮಿಕ್ಕಿ ಠೇವು ಸಂಗ್ರಹಿಸಿದೆ. ೧೦೬೪ ಕೋಟಿಗೂ ಅಧಿಕ ಸಾಲ ವಿತರಿಸಿದೆ. ೫೮೦ ಕೋಟಿಗೂ ಮಿಕ್ಕಿ ಗುಂತಾವಣಿಗಳನ್ನು ಹೊಂದಿದೆ. ೧೬೫೭ ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿ ೨೨೦೭೬ ಕೋಟಿಗೂ ಮಿಕ್ಕಿ ವಾರ್ಷಿಕ ವಹಿವಾಟು ಮಾಡಿದೆ, ಸಂಸ್ಥೆಯು ರೂ ೨೫ ಕೋಟಿ ಮೌಲ್ಯದ ೮ ಸ್ವಂತ ಕಟ್ಟಡಗಳನ್ನು ಹೊಂದಿದೆ ಮತ್ತು ಭವಿಷ್ಯದಲ್ಲಿ ಶಾಖೆಗಳಿಗೆ ಸ್ವಂತ ನೀವೇಶನ ಹಾಗೂ ಕಟ್ಟಡಗಳನ್ನು ಖರೀದಿಸುವ ಗುರಿ ಹೊಂದಲಾಗಿದೆ ಎಂದರು.
ಸಾರ್ವಜನಿಕ ವಲಯದ ರಾಷ್ಟ್ರಿಕೃತ ಬ್ಯಾಂಕುಗಳ ಸಾಲ ಮತ್ತು ಠೇವಣಿಗಳ ಬಡ್ಡಿದರಗಳಿಗೆ ಸ್ಪರ್ದಾತ್ಮಕ ರೀತಿಯಲ್ಲಿ ಠೇವಣಿ ಮತ್ತು ಸಾಲದ ಬಡ್ಡಿದರಗಳನ್ನು ಸಂಸ್ಥೆಯು ಅಳವಡಿಸಿಕೊಂಡಿದೆ. ಸುಮಾರು ೨೦೦ ಪವರ್ ಕಾರ್ಟಗಳಿಗೆ, ೫ ಬೃಹತ ಕಬ್ಬು ಕಟಾವು ಯಂತ್ರಗಳಿಗೆ, ಶಾಲಾ ಬಸ್ಸು ಮತ್ತು ನಾಲ್ಕು ಚಕ್ರ ವಾಹನ ಹಾಗೂ ಇತರೆ ವಾಹನಗಳಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ವಾಹನಸಾಲ, ಸದಸ್ಯರ ಅನೂಕುಲಕ್ಕಾಗಿ ಗೃಹ ಸಾಲ, ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸುಮಾರು ೧೨೦೦ ಎಕರೆ ಭೂಮಿಗೆ ೯೦೦ ಫಲಾನುಭವಿ ರೈತ ಸದಸ್ಯರಿಗೆ ಏತ ನೀರಾವರಿ ಸಾಲ ನೀಡಿದ್ದೇವೆ. ಅದೆ ರೀತಿ ಬಂಗಾರ ಸಾಲವನ್ನು ತ್ವರಿತವಾಗಿ ಅತಿ ಕಡಿಮೆ ಬಡ್ಡಿದರದಲ್ಲಿ ವಿತರಿಸುತ್ತಿದ್ದೇವೆ. ಸಂಸ್ಥೆಯು ತನ್ನ ಸದಸ್ಯ ಬಾಂಧವರಿಗೆ ಸೇಫ್ ಲಾಕರ್ ವ್ಯವಸ್ಥೆ, ಮೊಬೈಲ ರಿಚಾರ್ಜ, ಪ್ಯಾನ ಕಾರ್ಡ, ಪಾಸಪೊರ್ಟ್, ಇ-ಸ್ಟ್ಯಾಂಪ, ಆರ್ ಟಿ ಸಿ (ಉತಾg), ಬಸ್ ರೈಲು ಹಗೂ ವಿಮಾನ ಟಿಕೆಟ ಕಾಯ್ದಿರುಸುವಿP, ಇತರೆ ಬ್ಯಾಂಕುಗಳ ಸಹಯೊಗದೊಂದಿಗೆ ಆರ್ ಟಿ ಜಿ ಎಸ್ ಮತ್ತು ಎನ್ ಇ ಎಫ್ ಟಿ ಸೌಲಭ್ಯ.
ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಾಖೆಗಳು ಲಾಭದಲ್ಲಿದ್ದು ಸಂಸ್ಥೆಯ ಆಡಳಿತ ಮಂಡಳಿಯ, ಶಾಖೆಗಳ ಸಲಹಾ ಸಮಿತಿಗಳ ನಿಸ್ವಾರ್ಥ ಸೇವೆ ಸಿಬ್ಬಂದಿ ವರ್ಗದವರ ಸತತ ಪ್ರಯತ್ನ ಹಾಗೂ ಸಂಸ್ಥೆಯ ಸದಸ್ಯರ ಸಹಕಾರವೆ ಈ ಯಶಸ್ಸಿಗೆ ಕಾರಣ.

ಸಂಸ್ಥೆಯು ತನ್ನ ಸದಸ್ಯರನ್ನು ರೂ ೧ ಲಕ್ಷದವರೆಗೆ ಅಫಘಾತ ವಿಮೆಗೆ ಒಳಪಡಿಸಿದೆ. ಅದೆ ರೀತಿ ಸಂಸ್ಥೆಯು ಸಾಮನ್ಯ ಆರೋಗ್ಯ ಮತ್ತು ಜೀವ ವಿಮೆ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸದಸ್ಯರಿಗೆ ಸೇವೆಯನ್ನು ನೀಡುತ್ತಿದೆ. ಆರ್ಥಿಕ ವರ್ಷದಲ್ಲಿ ಸುಮಾರು ೫೦೦೦ ಮಿಕ್ಕಿ ಜೀ ಮತ್ತು ಸಾಮನ್ಯ ವಿಮೆಯ ಪಾಲಿಸಿಗಳ ಮಾರಾಟ ಮಾಡಿ ಇದರಲ್ಲಿ ೬೮ ಕ್ಕೂ ಅಧಿಕ ವಿಮೆದಾರರಿಗೆ ರೂ ೧೯ ಲಕ್ಷಕ್ಕೂ ಮೀರಿ ಪರಿಹಾರ ನೀಡಿರುತ್ತೇವೆ. ಅದೇ ರೀತಿ ಸಂಸ್ಥೆಯು ಸಾಮಾನ್ಯ ಮತ್ತು ಜೀವ ವಿಮೆ ಸೌಲಭ್ಯವನ್ನು ತನ್ನ ಸದಸ್ಯರಿಗೆ ನೀಡುತ್ತಿದೆ.
ಈ ಸೌಲಭ್ಯವನ್ನು ಸದಸ್ಯರು ಸದೂಪಯೋಗ ಪಡಿಸಿಕೊಳ್ಳಬೇಕು ಸಂಸ್ಥೆಯೂ ತನ್ನ ಸಿಬ್ಬಂದಿ ವರ್ಗದವರಿಗೆ ಖಾಸಗಿ ಪಿಂಚಣಿ ಯೋಜನೆಯನ್ನು ಅಳವಡಿಸಿದೆ. ಸಂಸ್ಥೆಯಲ್ಲಿ ವರ್ಷಾಂತ್ಯಕ್ಕೆ ಸುಮಾರು ೩೬೦ಕ್ಕೂ ಅಧಿಕ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ ೨೦೦ಕ್ಕೂ ಅಧಿಕ ಸಿಬ್ಬಂದಿ ವೇತನ ಶ್ರೇಣಿ ಖಾಯಂಗೊಳಿಸಲಾಗಿದೆ. ಸಂಸ್ಥೆಯು ಸಿಬ್ಬಂದಿಗಳಿಗೆ ಸಾಮಾನ್ಯ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸಿರುತ್ತದೆ ಹಾಗು ಸಂಸ್ಥೆಯಲ್ಲಿ ಒಟ್ಟು ೬೪ ಜನ ಪಿಗ್ಮಿ ಸಂಗ್ರಹಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಅತಿ ಶೀಘ್ರದಲ್ಲಿ ಸಂಸ್ಥೆಯು ಗಡಿರಾಜ್ಯವಾದ ಮಾಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ೩೦ಕ್ಕೂ ಅಧಿಕ ಶಾಖೆಗಳನ್ನು ಪ್ರಾರಂಭಿಸಲಿದೆ ಹಾಗೂ ತನ್ನ ಕಾರ್ಯವ್ಯಾಪ್ತಿಯನ್ನು ಗೋವಾ ರಾಜ್ಯಕ್ಕೂ ವಿಸ್ತರಿಸಿಕೊಳ್ಳಲಿದೆ ಎಂದರು ಈ ಸಮಯದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸಿದ್ದಗೌಡಾ ಮಗದುಮ, ನಿರ್ದೇಶಿಕಿಯಾದ ಪ್ರೀತಿ ದೊಡವಾಡ, ನಿರ್ದೇಶಕರಾದ ಮಲ್ಲಿಕಾರ್ಜುನ ಕೋರೆ,ಅಣ್ಣಾಸಾಬ ಸಂಕೇಶ್ವರಿ,ಬಸನಗೌಡಾ ಆಸಂಗಿ, ಸುಕುಮಾರ ಚೌಗಲೆ, ಪಿಂಟು ಹಿರೇಕುರಬರ, ಅಮಿತ ಜಾಧವ, ಪ್ರಫುಲ ಶೆಟ್ಟಿ, ಅಶೋಕ ಚೌಗಲಾ, ಬಾಳಪ್ಪಾ ಉಮರಾಣೆ, ಅನೀಲ ಪಾಟೀಲ, ಶೋಭಾ ಜಕಾತೆ, ಶೈಲಜಾ ಪಾಟೀಲ, ಪಾರ್ವತಿ ಧರನಾಯಕ, ಜಯಶ್ರೀ ಮೇದಾರ, ಶ್ರೀಕಾಂತ ಉಮರಾಣೆ, ವಿವೇಕಾನಂದ ಕಮತೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ದೇವೆಂದ್ರ ಕರೋಶಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.