Latest

ಡಾ.ವಿ.ಎಸ್.ಸೋಂದೆ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಹಿರಿಯ ಸಾಮಾಜಿಕ ಮುಂದಾಳು, ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಕನಸುಗಾರ ಡಾ.ವೈಕುಂಠರಾವ್ ಸದಾಶಿವರಾವ್ ಸೋಂದೆ ( ವಿ.ಎಸ್.ಸೋಂದೆ) ನಿಧನರಾಗಿದ್ದಾರೆ. ಅವರು 28-12-1930ರಂದು ಜನಿಸಿದ್ದರು.

ಉತ್ತರ ಕನ್ನಡ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರಾಗಿ, ಶಿರಸಿ ಅರ್ಬನ್ ಬ್ಯಾಂಕ್ ಚೇರಮನ್ ಆಗಿ, ಮಾಡರ್ನ ಎಜುಕೇಶನ್ ಸೊಸೈಟಿ (ಎಇಎಸ್) ಚೇರಮನ್ ಆಗಿ ಹಲವಾರು ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದರು.

ಶಿರಸಿ ರೋಟರಿ ಆಸ್ಪತ್ರೆ ಸ್ಥಾಪನೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಇತಿಹಾಸ, ಸಾಂಸ್ಕೃತಿಕ, ಧಾರ್ಮಿಕ, ವಾಣಿಜ್ಯ, ಶಿಕ್ಷಣ ಎಲ್ಲ ಕ್ಷೇತ್ರಗಳಲ್ಲೂ ಅವರು ಅಪಾರ ಜ್ಞಾನ ಹೊಂದಿದ್ದರು.

 

Home add -Advt

Related Articles

Back to top button