Belagavi NewsBelgaum News

*ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಕಾರು*

ಪ್ರಗತಿವಾಹಿನಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೊಲಕ್ಕೆ ನುಗ್ಗಿ ಪಲ್ಟಿಯಾದ ಘಟನೆ ನಡೆದಿದೆ. ಅಥಣಿ ತಾಲೂಕಿನ ತಾಂವಶಿ-ಅನಂತಪುರ ರಸ್ತೆಯ ಮೂಲಿಮನಿ ತೋಟದ ಹತ್ತಿರ ಘಟನೆ ಜರುಗಿದೆ. 

ಅಥಣಿ ತಾಲೂಕಿನ ಕಲ್ಲೋತ್ತಿ ಗ್ರಾಮದ ಶಿವಗೌಡ ವಿಜಯಗೌಡ ಪಾಟೀಲ ಎಂಬುವವರಿಗೆ ಸೇರಿದ ಶಿಫ್ಟ್ ಡಿಜೈರ್ ಕಾರು ರಸ್ತೆ ಬಿಟ್ಟು ಹೊಲಕ್ಕೆ ನುಗ್ಗಿದ ಪರಿಣಾಮ  ಪಲ್ಟಿಯಾಗಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಸೇಫ್ಟಿ ಏರಬ್ಯಾಗ್ ಓಪನ್ ಆಗಿ ಚಾಲಕ  ಬಚಾವಾಗಿದ್ದಾರೆ.

Related Articles

Back to top button