Kannada NewsKarnataka NewsLatest

*ರೇಣುಕಾ ಯಲ್ಲಮ್ಮ ದೇವಾಲಯದ ಬಾಗಿಲ ಮುಂದೆ ಐದು ಹಾವು ಪ್ರತ್ಯಕ್ಷ*

ಪ್ರಗತಿವಾಹಿನಿ ಸುದ್ದಿ: ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಐದು ಹಾವುಗಳು ಏಕಕಾಲಕ್ಕೆ ಕಾಣಿಸಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕನಕಪುರ ಗ್ರಾಮದಲ್ಲಿ ನಡೆದಿದೆ.

ಊರಿನ ಜನರು ಹೇಳುವ ಪ್ರಕಾರ ಈ ದೇವಸ್ಥಾನಕ್ಕೆ ಹಾಗೂ ಹಾವಿಗೆ ಯಾವುದೋ ನಂಟಿದೆ. ಏಕೆಂದರೆ ಕಳೆದ ವರ್ಷ ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೇವಾಲಯಕ್ಕೆ ಒಂದು ಹಾವು ಬಂದು ಹೋಗುತ್ತಿತ್ತಂತೆ. ಹಾಗಾಗಿ ಇಲ್ಲೇನೋ ವಿಶೇಷತೆ ಇದೆ ಅಂತಾರೆ ಗ್ರಾಮಸ್ಥರು. ಇನ್ನು ಈ ರೀತಿ ಹಾವುಗಳು ಬಂದಿದ್ದು ಜನರಲ್ಲಿ ಭಕ್ತಿಭಾವವನ್ನ ಹೆಚ್ಚು ಮಾಡಿದೆ.

ಇದು ಗ್ರಾಮಸ್ಥರಲ್ಲಿ ಆಶ್ಚರ್ಯವನ್ನ ಹುಟ್ಟುಹಾಕಿದೆ. ಇನ್ನು ಹಾವುಗಳು ದೇವಾಲಯದಲ್ಲಿ ಕಾಣಿಸಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಅದರಲ್ಲಿ ಹಾವುಗಳು ದೇವಸ್ಥಾನದ ಬಾಗಿಲ ಮೇಲೆ, ದೇವಿಯ ಮೂರ್ತಿಯ ಮೇಲೆ ಆಟವಾಡುವುದನ್ನ ನೋಡಬಹುದಾಗಿದೆ.

Home add -Advt

Related Articles

Back to top button